ಕಿಲೋ ಕಸಕ್ಕೆ ಒಂದು ರೂಪಾಯಿ ವಿಧಿಸಿರುವ ಬಿಬಿಎಂಪಿ ಕ್ರಮದ ವಿರುದ್ಧ ಹೋಟೆಲ್ ಸಂಘ ಪ್ರತಿಭಟನೆ ನಡೆಸಿದ ಬೆನ್ನಲ್ಲೇ ಬಿಬಿಎಂಪಿ ಈ ಬಗ್ಗೆ ಪ್ರತಿಕ್ರಿಯಿಸಿದ್ದು, ಹೋಟೆಲ್ ಹಾಗೂ ಕಲ್ಯಾಣ ಮಂಟಪಗಳು ತಾವೇ ಕಸ ವಿಲೇವಾರಿ ಮಾಡಿಕೊಳ್ಳಬಹುದು ಎಂದು ತಿಳಿಸಿದೆ.
ನಿಗದಿತ ಶುಲ್ಕವನ್ನು ಹೆಚ್ಚು ಎನ್ನುವ ಸಂಸ್ಥೆಗಳು ತಾವು ಉತ್ಪಾದಿಸುವ ಕಸವನ್ನು ಬಿಬಿಎಂಪಿ ತ್ಯಾಜ್ಯ ವಿಲೇವಾರಿ ಘಟಕಕ್ಕೆ ಸಾಗಿಸಬಹುದು. ಸದ್ಯ ಮಾವಳ್ಳಿಪುರದಲ್ಲಿರುವ ತ್ಯಾಜ್ಯ ಸಂಸ್ಕರಣ ಘಟಕಕ್ಕೆ ಪ್ರತಿ ಕೆ.ಜಿ.ಗೆ 17 ಪೈಸೆಯಂತೆ ಶುಲ್ಕ ಪಡೆದು ಬಿಬಿಎಂಪಿ ಕಸ ವಿಲೇವಾರಿ ಮಾಡುತ್ತಿದೆ.
ಹಾಗೆಯೇ ಖಾಸಗಿ ಸಂಸ್ಥೆಗಳು ತಮ್ಮ ಖರ್ಚಿನಲ್ಲಿ ಸಂಸ್ಕರಣ ಘಟಕಗಗಳಿಗೆ ಕಸ ಸಾಗಣೆ ಮಾಡಬೇಕಾಗುತ್ತದೆ. ಆದರೆ ಯಾವುದೇ ಕಾರಣಕ್ಕೂ ಬೀದಿಯಲ್ಲಿ ಕಸ ಹಾಕಲು ಅವಕಾಶ ನೀಡುವುದಿಲ್ಲ ಎಂದು ಬಿಬಿಎಂಪಿ ಆಯುಕ್ತ ಡಾ.ಎಸ್.ಸುಬ್ರಹ್ಮಣ್ಯ ಸ್ಪಷ್ಟಪಡಿಸಿದ್ದಾರೆ.
ಇದು ಹೋಟೆಲ್ ಮಾಲೀಕರನ್ನು ಮತ್ತೆ ಚಿಂತೆಗೀಡು ಮಾಡಿದ್ದು, ಮುಂದಿನ ಕಾರ್ಯತಂತ್ರಕ್ಕೆ ಹೋಟೆಲ್ ಮಾಲೀಕರ ಸಂಘ ಸಿದ್ಧತೆ ನಡೆಸುತ್ತಿದೆ.
|