ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಖ್ಯಾತ ಕಥೆಗಾರ ಎಂ.ವ್ಯಾಸ ವಿಧಿವಶ  Search similar articles
ಕನ್ನಡ ಸಾರಸ್ವತ ಲೋಕದ ಖ್ಯಾತ ಸಣ್ಣ ಕಥೆಗಾರ ಕಾಸರಗೋಡಿನ ಎಂ. ವ್ಯಾಸ (67ವ) ಅವರು ಬುಧವಾರ ತಮ್ಮ ಸ್ವಗೃಹದಲ್ಲಿ ನಿಧನ ಹೊಂದಿರುವುದಾಗಿ ಕುಟುಂಬದ ಮೂಲಗಳು ತಿಳಿಸಿವೆ.

ಅವರು ಕಳೆದ ಒಂದು ತಿಂಗಳಿನಿಂದ ಚಿಕೂನ್ ಗುನ್ಯಾದಿಂದ ಬಳಲುತ್ತಿದ್ದು, ಬುಧವಾರ ಮಧ್ನಾಹ್ನ ಕಾಸರಗೋಡು ವಿದ್ಯಾನಗರದ ಖಾಸಗಿ ಆಸ್ಪತ್ರೆಗೆ ತೆರಳಿ ಚುಚ್ಚುಮದ್ದು ಹಾಕಿಸಿ ಮನೆಗೆ ವಾಪಸಾಗುತ್ತಿದ್ದ ವೇಳೆ ಹೃದಯಾಘಾತದಿಂದ ಕೊನೆಯುಸಿರೆಳೆದರು.

ಸಭೆ,ಸಮಾರಂಭ ಎಂದರೆ ಮಾರು ದೂರ ನಿಲ್ಲುತ್ತಿದ್ದ ವ್ಯಾಸರು ಸಣ್ಣ ಕಥಾಲೋಕದಲ್ಲಿ ಆಗಾಧ ಪ್ರಮಾಣದಲ್ಲಿ ಅಭಿಮಾನಿಗಳನ್ನು ಹೊಂದಿದ್ದ ಅವರು, ಕೃತ, ಕಂಬನಿ ಎಂಬ ಕಥಾ ಸಂಕಲನ, ಸುಳಿ, ಕ್ಷೇತ್ರ ಕವನ ಸಂಕಲನ ಹಾಗೂ ಸ್ನಾನ ಎಂಬ ಕಿರು ಕಾದಂಬರಿಯನ್ನೂ ಪ್ರಕಟಿಸಿದ್ದರು.

ನಾಡಿನ ಹೆಸರಾಂತ ದಿನಪತ್ರಿಕೆ, ವಾರಪತ್ರಿಕೆ ಹಾಗೂ ಪಾಕ್ಷಿಕಗಳಲ್ಲಿ ವ್ಯಾಸರು 350ಕ್ಕೂ ಹೆಚ್ಚು ಕಥೆ ಸೇರಿದಂತೆ ಲೇಖನಗಳನ್ನು ಬರೆದಿದ್ದು, 250 ಬಿಡಿ ಕವನಗಳನ್ನು ಬರೆದಿದ್ದರು.
ಮತ್ತಷ್ಟು
ಮತ್ತೆ ಲೋಕಸಭೆಗೆ ಸ್ಪರ್ಧಿಸಲಾರೆ: ಮನೋರಮಾ
ರಸಗೊಬ್ಬರ: ಮತ್ತೆ ಭುಗಿಲೆದ್ದ ಹಿಂಸಾಚಾರ
ಕಾಂಗ್ರೆಸ್‌‌ನಿಂದ ವಿಜಯೋತ್ಸವ - ಬಿಜೆಪಿ ಪ್ರತಿಭಟನೆ
ಕಸಾಪ ಚುನಾವಣೆ: 7 ನಾಮಪತ್ರ ಸ್ವೀಕೃತ
ಲೋಡ್ ಶೆಡ್ಡಿಂಗ್ ಅನಿವಾರ್ಯ: ಈಶ್ವರಪ್ಪ
ಹೊಗೇನಕಲ್ ಕುರಿತು ಮತ್ತೆ ಸರ್ವಪಕ್ಷ ಸಭೆ: ಸಿಎಂ