ಗಂಡನ ಉಪಟಳ ತಾಳಲಾರದೆ ಮಹಿಳೆಯೊಬ್ಬಳು ತನ್ನ ಮೂವರು ಮಕ್ಕಳಿಗೆ ವಿಷಪ್ರಾಶನ ಮಾಡಿ, ತಾನು ಆತ್ಮಹತ್ಯೆಗೆ ಶರಣಾದ ಹೃದಯವಿದ್ರಾವಕ ಘಟನೆ ಗುರುವಾರ ಧಾರವಾಡದಲ್ಲಿ ನಡೆದಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದೆ.
ಧಾರವಾಡದ ನಿವಾಸಿ ಕವಿತಾ ಚೌಹಾಣ್ ಎಂಬವರು ಅಂಗಡಿ ವಿಚಾರದಲ್ಲಿ ಗಂಡನ ಕಿರಿಕಿರಿ ತಾಳಲಾರದೇ ತನ್ನ ಮೂವರು ಮಕ್ಕಳಿಗೆ ವಿಷವುಣಿಸಿ,ತಾನು ಸಾವಿಗೆ ಶರಣಾಗಿದ್ದಳು.
ಆದರೆ ದುರಾದೃಷ್ಟ ಎಂಬಂತೆ ಒಂದುವರೆ ವರ್ಷದ ಮಗು ಸಾವನ್ನಪ್ಪಿದ್ದರೆ, ಮತ್ತಿಬ್ಬರು ಮಕ್ಕಳಾದ ಮೂರರ ಹರೆಯದ ಕೀರ್ತಿ ಮತ್ತು ದೀಪ್ತಿ ಸ್ಥಿತಿ ಚಿಂತಾಜನಕವಾಗಿರುವುದಾಗಿ ಕಿಮ್ಸ್ ಆಸ್ಪತ್ರೆಯ ವೈದ್ಯರು ಹೇಳಿದ್ದಾರೆ.
ಇದೀಗ ಎರಡು ಮಕ್ಕಳನ್ನು ಕಿಮ್ಸ್ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ಪ್ರಕರಣವನ್ನು ದಾಖಲಿಸಿಕೊಂಡಿ ದ್ದು, ತನಿಖೆ ನಡೆಸುತ್ತಿರುವುದಾಗಿ ಪೊಲೀಸ್ ಅಧಿಕಾರಿ ಅಂಬರೀಶ್ ಬಾರಿಕೇರ ಅವರು ತಿಳಿಸಿದ್ದಾರೆ.
|