ನೈಸ್ ಕಂಪೆನಿಗೆ ಭೂಮಿ ನೀಡುವ ಸಂಬಂಧ ಎದುರಾಗುವ ಯಾವುದೇ ವಿರೋಧಕ್ಕೆ ಉತ್ತರಿಸಲು ಸಿದ್ಧ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ತಿಳಿಸಿದ್ದಾರೆ.
ಇತ್ತೀಚೆಗಷ್ಟೇ ಮೂಲ ಒಪ್ಪಂದಕ್ಕೆ ವಿರುದ್ಧವಾಗಿ ನೈಸ್ ಕಂಪೆನಿಗೆ ಭೂಮಿ ನೀಡಿದರೆ ಹೋರಾಟ ನಡೆಸುವುದಾಗಿ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ನೀಡಿರುವ ಹೇಳಿಕೆಗೆ ಅವರು ಪ್ರತಿಕ್ರಿಯಿಸುತ್ತಿದ್ದಾರೆ.
ಬೆಂಗಳೂರು-ಮೈಸೂರು ಕಾರಿಡಾರ್ ರಸ್ತೆ ಕಾಮಗಾರಿ, ನೈಸ್ ಕಂಪೆನಿಯ ಒಪ್ಪಂದ ಎಲ್ಲವೂ ಜೆಡಿಎಸ್ ಸರ್ಕಾರ ಅಸ್ವಿತ್ವದಲ್ಲಿರುವಾಗಲೇ ನಡೆದಿದೆ. ಆದರೆ ಈಗ ಜೆಡಿಎಸ್ ಈ ಬಗ್ಗೆ ತಕಾರರು ಎಬ್ಬಿಸಿರುವುದು ಯಾವ ನ್ಯಾಯ ಎಂದು ಅವರು ಪ್ರಶ್ನಿಸಿದ್ದಾರೆ.
ನ್ಯಾಯಾಲಯದ ಆದೇಶದಂತೆ ನೈಸ್ ಕಂಪೆನಿಗೆ ಭೂಮಿ ನೀಡುವುದು ಸರ್ಕಾರದ ಕರ್ತವ್ಯವಾಗಿದೆ. ಈ ಬಗ್ಗೆ ಬರುವ ವಿರೋಧವನ್ನು ಎದುರಿಸಲು ಸರ್ಕಾರ ಸಿದ್ಧವಾಗಿದೆ ಎಂದು ಅವರು ತಿಳಿಸಿದರು.
|