ನೈಸ್ ಯೋಜನೆ ವಿವಾದ ಸೃಷ್ಟಿಯಾಗಲು ದೇವೇಗೌಡರೇ ಕಾರಣ ಎಂದು ನೈಸ್ ಸಂಸ್ಥೆ ಮುಖ್ಯಸ್ಥ ಅಶೋಖ್ ಖೇಣಿ ಕಿಡಿಕಾರಿದ್ದಾರೆ. ಬೆಂಗಳೂರಿನಲ್ಲಿ ಅವರು ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದರು.
ಆರಂಭದಿಂದಲೂ ನೈಸ್ ಯೋಜನೆಗೆ ಅಡ್ಡಿಪಡಿಸುತ್ತಿರುವ ದೇವೇಗೌಡರು, ಯೋಜನೆಯ ಪ್ರಮುಖ ಅಡ್ಡಿಯಾಗಿದ್ದಾರೆ. ಈಗ ಗೊಟ್ಟಿಗೆರೆ ಗ್ರಾಮದ ರೈತರು ನೈಸ್ ಯೋಜನೆಗೆ ಭೂಮಿ ನೀಡುವುದಿಲ್ಲ ಎನ್ನಲೂ ದೇವೇಗೌಡರೇ ಕಾರಣ. ಯೋಜನೆಯ ವಿರುದ್ಧ ಈ ರೈತರನ್ನು ಗೌಡರು ಎತ್ತಿಕಟ್ಟಿದ್ದಾರೆ ಎಂದು ಆರೋಪಿಸಿದರು.
ಜನವರಿ 1 ರಿಂದ ಪರಿಷ್ಕೃತ ದರವನ್ನು ಜಾರಿಮಾಡಲಿದ್ದು, ಅದಕ್ಕೂ ಮೊದಲು ಮುಖ್ಯಮಂತ್ರಿಗಳ ಜತೆ ಚರ್ಚಿಸಲಾಗುವುದು. ಈಗ ವಿಧಿಸಿರುವ ದರದಲ್ಲಿ ಶೇ.20 ರಷ್ಟನ್ನು ಇಳಿಸುವ ಉದ್ದೇಶ ಸಂಸ್ಥೆಯ ಮುಂದಿದೆ ಎಂದು ಇದೇ ಸಂದರ್ಭದಲ್ಲಿ ಅವರು ತಿಳಿಸಿದರು. |