ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ > ರಾಜಕೀಯಕ್ಕೆ ಜನತೆಯಿಂದ ಸರ್ಜರಿ ಅಗತ್ಯ: ಲೋಕಾಯುಕ್ತ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ರಾಜಕೀಯಕ್ಕೆ ಜನತೆಯಿಂದ ಸರ್ಜರಿ ಅಗತ್ಯ: ಲೋಕಾಯುಕ್ತ
ಸಾರ್ವಜನಿಕರು ಎಚ್ಚೆತ್ತುಕೊಂಡು ರಾಜಕೀಯಕ್ಕೆ ಮೇಜರ್ ಸರ್ಜರಿ ಮಾಡದಿದ್ದರೆ ಪ್ರಜಾಪ್ರಭುತ್ವ ವ್ಯವಸ್ಥೆ ಗಂಡಾಂತರಕ್ಕೆ ಸಿಲುಕಲಿದೆ ಎಂದು ಲೋಕಾಯುಕ್ತ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ ಆತಂಕ ವ್ಯಕ್ತಪಡಿಸಿದ್ದಾರೆ.

ನಗರದಲ್ಲಿ ಖಾಸಗಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಜನಸೇವೆ ಮಾಡುತ್ತೇವೆಂದು ಅಧಿಕಾರಕ್ಕೆ ಬರುವ ರಾಜಕಾರಣಿಗಳು ಜನರಿಂದಲೇ ದೂರವಾಗುತ್ತಿದ್ದಾರೆ. ಇದರಿಂದ ದೇಶದ ಪ್ರಜಾಪ್ರಭುತ್ವ ವ್ಯವಸ್ಥೆ ಸಂಪೂರ್ಣ ಬದಲಾಗುತ್ತಿದೆ ಎಂದು ಬೇಸರಿಸಿದರು.

ಈ ನಿಟ್ಟಿನಲ್ಲಿ ಸಾರ್ವಜನಿಕರು ಎಚ್ಚೆತ್ತುಕೊಳ್ಳಬೇಕಿದೆ. ರಾಜಕೀಯವನ್ನು ಸರಿದಾರಿಗೆ ತರದಿದ್ದರೆ ರಾಜಕೀಯ ಪಕ್ಷಗಳು ಜನರಿಂದ ಮತ್ತಷ್ಟು ದೂರವಾಗಲಿದೆ ಎಂದು ಅವರು ಎಚ್ಚರಿಕೆ ನೀಡಿದರು.

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರಜಾ ಸೇವಕರನ್ನು ಆಯ್ಕೆ ಮಾಡಬೇಕೇ ಹೊರತು, ಜನನಾಯಕರನ್ನಲ್ಲ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಎಲ್ಲರೂ ಸರ್ಕಾರಿ ನೌಕರರೇ, ಯಾರೂ ಇಲ್ಲಿ ಅಧಿಕಾರಿಗಳಲ್ಲ ಎಂದು ಅವರು ಅಭಿಪ್ರಾಯಪಟ್ಟರು.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಉಪಚುನಾವಣೆ; ಮೂರು ಕ್ಷೇತ್ರಗಳಲ್ಲಿ ಜೆಡಿಎಸ್ ಸ್ಪರ್ಧೆ
ಸಂಪೂರ್ಣ ಪಾನ ನಿಷೇಧ ಪ್ರಸ್ತಾವನೆ: ಸಚಿವ ಸುರೇಶ್
ಇಂದು ರಾಜ್ಯದೆಲ್ಲೆಡೆ ಸಂಭ್ರಮದ ನಾಗರಪಂಚಮಿ
ಬಿಜೆಪಿ ಕಚೇರಿ ಧ್ವಂಸದ ಹಿಂದೆ ಕಾಂಗ್ರೆಸ್ ಕೈವಾಡ
ಕೆಎಂಎಫ್: 3ತಿಂಗಳ ನಂತ್ರ ಡಿ.ವಿ.ಗೆ ಅಧ್ಯಕ್ಷ ಪಟ್ಟ
ಪಿಯುಸಿ ಸಪ್ಲಿಮೆಂಟರಿ ಫಲಿತಾಂಶ ಪ್ರಕಟ