ಸರ್ಕಾರ ಎಡವಿದೆ ಅನ್ನೋದು ಸ್ವತಃ ಅಧಿಕಾರದಲ್ಲಿ ಇರುವವರಿಗೆ ತಿಳಿದಿಲ್ಲ ಎಂದು ಜನಾರ್ಧನ ಪೂಜಾರಿ ಆಡಳಿತಾರೂಢ ಬಿಜೆಪಿಯನ್ನು ಕಟುವಾಗಿ ಟೀಕಿಸಿದ್ದಾರೆ.
ಮಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆಡಳಿತ ಪಕ್ಷದ ಆಂತರಿಕ ಕಿತ್ತಾಟ ಹಾಗೂ ಕಾರ್ಯ ವೈಖರಿಯ ಬಗೆಗೆ ಕಿಡಿ ಕಾರಿದರು. ಪಕ್ಷದೊಳಗೆ ಬಿಕ್ಕಟ್ಟು ಉಲ್ಭಣವಾಗಿ ಮಂತ್ರಿಗಳು ಕಿತ್ತಾಟಕ್ಕೆ ಇಳಿದಿದ್ದಾರೆ. ಅದಲ್ಲದೆ ಪ್ರಜೆಗಳ ಯೋಗಕ್ಷೇಮ ನೋಡಿಕೊಳ್ಳಬೇಕಾದ ಸಚಿವರುಗಳು ರಾಜ್ಯವನ್ನೇ ಬಿಟ್ಟಿದ್ದಾರೆ ಎಂದು ಲೇವಡಿ ಮಾಡಿದರು.
ಅಭಿವೃದ್ದಿ ಕಾರ್ಯ ಮಾಡಿದ್ದೇವೆ ಎಂದು ಜನರಿಗೆ ಸುಳ್ಳು ಹೇಳಿಕೆ ನೀಡುತ್ತಿದೆ ಈಗಿನ ಸರ್ಕಾರ ಎಂದ ಪೂಜಾರಿ, ರಾಜ್ಯ ಬಿಜೆಪಿ ಸರ್ಕಾರದ ವಿರುದ್ದ ವಾಗ್ದಾಳಿ ನಡೆಸಿದರು. ಇಷ್ಟೆಲ್ಲ ನ್ಯೂನ್ಯತೆಗಳನ್ನು ಹೊಂದಿರುವ ಸರ್ಕಾರ ಇದೆಯೇ ಎಂದು ಅವರು ಈ ಸಂದರ್ಭದಲ್ಲಿ ಪ್ರಶ್ನಿಸಿದರು.