ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಅನಿವಾಸಿ ಕನ್ನಡಿಗ | ಓದುಗರ ಅಭಿಮತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ವರದಕ್ಷಿಣೆ ಕಿರುಕುಳ: ಮೈಸೂರಿನಲ್ಲಿ ತಾಯಿ-ಮಗುವಿಗೆ ಬೆಂಕಿಹಚ್ಚಿ ಕೊಲೆ (Bangalore | Mysore | dowry harassment | dowry |Latest News in Kannada | Kannada News | Karnataka News | Latest Karnataka News |)
ವರದಕ್ಷಿಣೆ ದಾಹಕ್ಕೆ ಪುಟ್ಟ ಹಸುಳೆ ಹಾಗೂ ಪತ್ನಿಯನ್ನು ಜೀವಂತವಾಗಿಯೇ ಬೆಂಕಿ ಹಚ್ಚಿ ಕೊಲೆಗೈದಿರುವ ದಾರುಣ ಘಟನೆ ಮೈಸೂರಿನ ನಜರಬಾದ್‌ನಲ್ಲಿ ನಡೆದಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ತಾಜಾ ಸುದ್ದಿ, ಕನ್ನಡ ಸುದ್ದಿ, ಕನ್ನಡ ಲೇಖನಗಳಿಗಾಗಿ ನಿಮ್ಮ ವೆಬ್‌ದುನಿಯಾಕ್ಕೆ ಭೇಟಿ ಕೊಡಿ

ಮೈಸೂರು ನಿವಾಸಿಯಾದ ದಿವ್ಯಾಳನ್ನು ಒಂದು ವರ್ಷದ ಹಿಂದೆ ರಾಜೀವ್ ಎಂಬಾತನ ಜತೆ ಅದ್ದೂರಿಯಾಗಿ ವಿವಾಹ ಮಾಡಿಕೊಡಲಾಗಿತ್ತು. ಈ ಸಂದರ್ಭದಲ್ಲಿ ವರನಿಗೆ ಒಂದು ಲಕ್ಷ ರೂಪಾಯಿ ನಗದು, ನೂರು ಗ್ರಾಂ ಚಿನ್ನ, ಎರಡು ಕೆಜಿ ಬೆಳ್ಳಿ ಸಾಮಾಗ್ರಿಗಳನ್ನು ನೀಡಲಾಗಿತ್ತು.

ಇದೀಗ ಒಂದು ವರ್ಷದ ನಂತರ ತನಗೆ ಮತ್ತಷ್ಟು ವರದಕ್ಷಿಣೆ ಬೇಕೆಂದು ಪತ್ನಿ ದಿವ್ಯಾಗೆ ಪತಿ ರಾಜೀವ್ ಹಾಗೂ ಮನೆಯವರು ಕಿರುಕುಳ ನೀಡುತ್ತಿದ್ದಾರೆಂದು ಆರೋಪಿಸಿದ್ದಾರೆ. ಆದರೆ ಮಂಗಳವಾರ ಬೆಳಿಗ್ಗೆ ದಿವ್ಯಾ ತವರಿಗೆ ಫೋನ್ ಮಾಡಿ ತನ್ನನ್ನು ಮನೆಗೆ ಕರೆದುಕೊಂಡು ಹೋಗಿ ಎಂದು ಗೋಗರೆದಿದ್ದಳು. ಬುಧವಾರ ಗೌರಿ-ಗಣೇಶ ಹಬ್ಬ, ಹಾಗಾಗಿ ಹಬ್ಬದ ದಿನ ಗಂಡನ ಮನೆಯಲ್ಲೇ ಇರು. ನಂತರ ಕರೆದುಕೊಂಡು ಹೋಗುವುದಾಗಿ ಸಮಧಾನ ಹೇಳಿದ್ದರು.

ಮಂಗಳವಾರ ರಾತ್ರಿ ಪತ್ನಿ ದಿವ್ಯಾ ಹಾಗೂ ಪುಟ್ಟ ಮಗು ತನುಶ್ರೀಯನ್ನು ಗಂಡ ರಾಜೀವ್ ಹಾಗೂ ಮನೆಯವರಾದ ರವಿ, ವಿಜಯಲಕ್ಷ್ಮಿ, ಲತಾ ಸೇರಿ ಬೆಂಕಿಹಚ್ಚಿ ಕೊಲೆಗೈದಿರುವುದಾಗಿ ದಿವ್ಯಾ ಮನೆಯವರು ಆರೋಪಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ನಜರಬಾದ್ ಪೊಲೀಸರು ಪತಿ ರಾಜೀವ್ ಹಾಗೂ ವಿಜಯಲಕ್ಷ್ಮಿಯನ್ನು ಬಂಧಿಸಿದ್ದಾರೆ. ಏತನ್ಮಧ್ಯೆ ಲತಾ ಮತ್ತು ರವಿ ಪರಾರಿಯಾಗಿದ್ದಾರೆ.
ಇವನ್ನೂ ಓದಿ
ಇದನ್ನು ಸಹ ಶೋಧಿಸು: ಕನ್ನಡ ಸುದ್ದಿ, ಕರ್ನಾಟಕ ಸುದ್ದಿ, ತಾಜಾ ಕನ್ನಡ ಸುದ್ದಿ, ರಾಜಕೀಯ, ಬೆಂಗಳೂರು ಸುದ್ದಿ, ಮೈಸೂರು, ವರದಕ್ಷಿಣೆ ಕಿರುಕುಳ, ದಹನ