ಮುಖ್ಯ ಪುಟ  ಧರ್ಮ > ನೀವು ನಂಬುವಿರಾ > ಕಥನ
 
ವರ ಪ್ರಾಪ್ತಿಗೆ ಶವ ಸಾಧನೆ...!
shava sadhana
WDWD
ಕೆಲವರಿಗೆ ಕಾರಿರುಳ ರಾತ್ರಿಯ ಪಯಣಗಳು ರೋಚಕ ಅನುಭವ ನೀಡುತ್ತವೆ. ಇನ್ನು ಕೆಲವರಿಗೆ ಸಾಧನೆಯಲ್ಲಿ ಸಾಗಿ ತಮ್ಮ ಗುರಿ ಮುಟ್ಟಲು ನಟ್ಟಿರುಳ ರಾತ್ರಿಯಲ್ಲಿ ಸ್ಮಶಾನದ ಶವಗಳೇ ಬೇಕು.

ಇಷ್ಟಾರ್ಥ ಸಿದ್ದಿಗಾಗಿ ನಡೆಯುವ ಈ ಚಿದಂಬರ ರಹಸ್ಯದ ಸಾಧನೆಗಳು ನಿಜವಾಗಿ ಪ್ರಕೃತಿ ಮತ್ತು ದೇವರನ್ನು ತೃಪ್ತಿಗೊಳಿಸಬಲ್ಲವೇ ಎನ್ನುವ ಪ್ರಶ್ನೆಗೆ ಉತ್ತರವಂತೂ ಇನ್ನೂ ನಮಗೆ ಸಿಕ್ಕಿಲ್ಲ. ಆದರೆ ಅಂತಹ ಸಾಧನೆಯೊಂದನ್ನು ನೋಡುವ ಅವಕಾಶದಲ್ಲಿ ರೋಮಾಂಚನ ಅನುಭವಿಸಿದ ಪ್ರಸಂಗವೊಂದು ನಮಗೆ ಎದುರಾಗಿತ್ತು !
ಇಲ್ಲಿ ಫೋಟೋ ಗ್ಯಾಲರಿಗಾಗಿ ಕ್ಲಿಕ್ ಮಾಡಿ

ನಡು ರಾತ್ರಿಯಲ್ಲಿ ನಡೆಯವ ಶವ ಸಾಧನೆಯನ್ನು ನೋಡಬೇಕೆಂಬುದು ನಮ್ಮ ಕಾತುರ. ಇದಕ್ಕೆ ಹೂಂಗುಟ್ಟಿದವರು ಚಂದ್ರಪಾಲ್ ಎನ್ನುವ ಮಾಂತ್ರಿಕ. ಮಧ್ಯಪ್ರದೇಶದ ಉಜ್ಜಯಿನಿ ಸಮೀಪ ಕ್ಷಿಪ್ರಾ ನದಿ ಬಳಿಯ ಚಕ್ರತೀರ್ಥ ಸ್ಮಶಾನದಲ್ಲಿ ಚಂದ್ರಪಾಲ್ ಮಾಡಿದ ಶವ ಸಾಧನೆಯ ತುಣುಕುಗಳನ್ನು ನೋಡಿ ಭಯದಿಂದ ತಲೆ ಸುತ್ತುವುದು ಒಂದು ಬಾಕಿ.

ಕ್ಷಿಪ್ರಾ ನದಿ ತಟದ ಮೇಲೆ ನಡೆದ ಆ ಶವ ಸಾಧನೆಯ ಆರಂಭಿಕ ಹಂತಗಳ ಪರಿಚಯ ಮಾತ್ರ ಓದುಗರಿಗೆ ನೀಡಬಹುದು. ಅಂತಿಮ ಹಂತದ ಶವ ಸಾಧನೆಯ ಕ್ರಮಗಳು ನಮಗೆ ದೊರೆತಿಲ್ಲ.

ಅದು ಶವಸಾಧನೆಯ ಮಧ್ಯರಾತ್ರಿ. ಮಾಂತ್ರಿಕ ಚಂದ್ರಪಾಲ್ ಶವ ಪೂಜೆಗೆ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳುತ್ತ ಕ್ಷಿಪ್ರಾ ನದಿಯಲ್ಲಿ ದೀಪಗಳನ್ನು ತೇಲಿ ಬಿಡುತ್ತಾರೆ. ಆ ದೀಪಗಳು ಆ ಶವದ ಆತ್ಮಕ್ಕೆ ದಾರಿದೀಪವಾಗಿ ಶವ ಸಾಧಕನ ಇಚ್ಛೆಗಳನ್ನು ಪೂರೈಸಲು ಬರುತ್ತವೆ.

WDWD
ಇಲ್ಲಿಂದ ಶುರುವಾದ ಪೂಜೆ ನಾವು ಅಲ್ಲಿಂದ ಕಾಲ್ಕೀಳುವ ಮುನ್ನ ನಿರ್ಣಾಯಕ ಹಂತವನ್ನು ತಲುಪಿರಲಿಲ್ಲ. ಆ ಆತ್ಮಕ್ಕೆ ದಾರಿದೀಪ ತೋರಿದ ಮಾಂತ್ರಿಕ ಚಂದ್ರಪಾಲ್ ಅಸ್ಪಷ್ಟವಾಗಿ ಕೆಲ ಮಂತ್ರಗಳನ್ನು ಉಚ್ಚರಿಸುತ್ತಾ ಆ ಶವದ ಸುತ್ತ ಮೇರೆಯನ್ನು ಗುರುತಿಸುತ್ತಾನೆ. ಪೂಜೆಗೆ ಅಡ್ಡಿ ಪಡಿಸುವ ಭೂತ ಪ್ರೇತಗಳಿಗೆ ಬಲಿ ಹಾಕಿದ ಮೇಲೆ ಅದೋ ಶುರುವಾಯಿತು ನೋಡಿ ಶವ ಸಾಧಕನ ಸಾಧನೆ!

ಶವದ ಮೇಲೆ ಕಾಳಿಯಂತೆ ನಿಂತ ಚಂದ್ರಪಾಲ್ ಮಂತ್ರೋಚ್ಚಾರಣೆ ಮುಗಿಸಿದರು. ಅಲ್ಲಿ ಕುಳಿತಿದ್ದ ತನ್ನ ಅನುಯಾಯಿಗಳಿಗೆ ಮಾಂಸ ಮದ್ಯ ನೀಡಿ ಮುಂದಿನ ಹಂತದ ಪೂಜೆಗೆ ಅಣಿಯಾದರು. ಇಲ್ಲಿ ಚರ್ಚಿಸಿ.
ವೀಡಿಯೋ ವೀಕ್ಷಿಸಿ
  1 | 2  >> 
ಫೋಟೋಗ್ಯಾಲರಿ
ಇಲ್ಲಿ ಫೋಟೋ ಗ್ಯಾಲರಿಗಾಗಿ ಕ್ಲಿಕ್ ಮಾಡಿ
ವೆಬ್‌ದುನಿಯಾ ಚರ್ಚೆ
ಸ್ಮಶಾನ ಸಾಧನಾ ಮತ್ತು ತಂತ್ರ- ಮಂತ್ರಗಳು ಜನಸಾಮಾನ್ಯರನ್ನು ವಂಚಿಸುವ ಸರಳ ಮಾರ್ಗವೇ? ಇಲ್ಲಿ ಚರ್ಚಿಸಿ.
ಮತ್ತಷ್ಟು
ಕಾಲಸರ್ಪ ಯೋಗ ಮತ್ತು ಪರಿಹಾರ
ಬಾಯಿಯಿಂದ ಕಿಡ್ನಿ ಕಲ್ಲು ತೆಗೆಯುವ ಅಜ್ಜಿ!
ಹಾವು ಕಡಿತಕ್ಕೆ ಫೋನಿನಲ್ಲೇ ಚಿಕಿತ್ಸೆ!
ಮದಿರೆ ಸೇವಿಸೋ ಕಾಲಭೈರವ
ಪಾರ್ಶ್ವವಾಯು ಗಾಯಬ್ ಮಾಡುವ ಮಂತ್ರಜಲ
ಮುಸ್ಲಿಂ ಜಗತ್ತಿನ ಪವಿತ್ರ ತಾಣ - ಕರ್ಬಾಲ