ಈ ಬಾರಿಯ ನಮ್ಮ ನಂಬಿಕೆ ಮತ್ತು ಅಪನಂಬಿಕೆಗಳ ಪಯಣದಲ್ಲಿ ಕಳೆದ ಬಾರಿ ಗಂಧರ್ವ ಸೇನ ಮಂದಿರವನ್ನು ಪರಿಚಯಿಸಿದಂತೆ ಅದೇ ಪ್ರದೇಶದಲ್ಲಿ ಇರುವ ಗಂಧರ್ವಪುರಿಯ ಶಾಪದ ಕುರಿತು ಪರಿಚಯಿಸುತ್ತಿದ್ದೇವೆ. ಕೇವಲ ಓರ್ವ ಗಂಧರ್ವನ ಶಾಪದ ಫಲವಾಗಿ ಕಲ್ಲಾಗಿ ಈ ಊರು ಪರಿವರ್ತನೆಗೊಂಡಿದೆ ಎಂದರೆ ನಂಬುತ್ತಿರಾ? ಅದು ನಿಮಗೆ ಬಿಟ್ಟದ್ದು.
ಮಧ್ಯ ಪ್ರದೇಶದ ದೇವಾಸ್ನ ಜಿಲ್ಲೆಯ ವ್ಯಾಪ್ತಿಯಲ್ಲಿ ಬರುವು ಈ ಊರಿನ ಹೆಸರು ಗಂಧರ್ವಪುರಿ. ಬೌದ್ಧ ಉನ್ನತಿ ಅವನತಿಗಳನ್ನು ಕಂಡ ಊರು ಇದು. ಮೊದಲು ಚಂಪಾವತಿ ಎಂದು ಹೆಸರು ಪಡೆದಿದ್ದ ಊರಿಗೆ ಚಂಪಾವತಿಯು ತನ್ನ ಮಗ ಗಂಧರ್ವಸೇನನ ನೆನಪಿಗೆ ಈ ಊರಿನ ಹೆಸರನ್ನು ಗಂಧರ್ವಪುರಿ ಎಂದು ಪುನರ್ನಾಮಕರಣ ಮಾಡಿದಳು ಎಂಬ ಐತಿಹ್ಯ ಇದೆ.
ಇಲ್ಲಿನ ಜನಗಳ ಪ್ರಕಾರ ಗಂಧರ್ವಭಿಲ್ ಎಂದು ಹೆಸರು ಪಡೆದಿದ್ದ ಮಾಳವದ ಗಂಧರ್ವಸೇನನು ಕಲ್ಲಾಗಿ ಹೋಗಲಿ ಎಂದು ಈ ಹಳ್ಳಿಗೆ ಶಾಪ ನೀಡಿದನು ಎಂಬ ನಂಬಿಕೆ ಇದೆ. ಶಾಪದ ಕಾರಣವೋ ಅಥವಾ ಮತ್ತಾವ ಕಾರಣದಿಂದಲೋ ಈಗಿರುವ ಗಂಧರ್ವಪುರಿಯ ಭೂಗರ್ಭದಲ್ಲಿ ಮೂರ್ತಿಗಳು ಇವೆ. ಮತ್ತು ಹಲವಾರು ಬಾರಿ ಇಲ್ಲಿನ ಗ್ರಾಮಸ್ಥರಿಗೆ ಶಿಲಾ ಮೂರ್ತಿಗಳು ಭೂಮಿಯನ್ನು ಅಗಿಯುವ ಸಂದರ್ಭದಲ್ಲಿ ದೊರೆತಿವೆ.
ನಂಬಿಕೆಯ ಪ್ರಕಾರ ಗಂಧರ್ವಸೇನನಿಗೆ ನಾಲ್ಕು ಬಾರಿ ವಿವಾಹವಾಗಿತ್ತಂತೆ. ಅವನ ನಾಲ್ವರು ಹೆಂಡಂದಿರು ನಾಲ್ಕು ವರ್ಣಗಳ ಹಿನ್ನೆಲೆಯಿಂದ ಬಂದವರಾಗಿದ್ದರು.ಶತ್ರಾನಿ ಎನ್ನುವವಳಿಂದ ಅವನಿಗೆ ಶಂಖ, ರಾಜಾ ವಿಕ್ರಮಾದಿತ್ಯ ಮತ್ತು ಭತೃಹರಿ ಎಂಬ ಮೂವರು ಗಂಡು ಮಕ್ಕಳು ಜನಿಸಿದರು.
|