ಪ್ರತಿ ಪೂರ್ಣಿಮೆಯ ದಿನ ಇಲ್ಲಿ ಲಕ್ಷದ ಲೆಕ್ಕದಲ್ಲಿ, ಅದೂ ಬರಿಗಾಲಿನಲ್ಲಿ 14 ಕಿ ಮಿ ದೂರದಲ್ಲಿರುವ ಬೆಟ್ಟಕ್ಕೆ ತೆರಳುತ್ತಾರೆ. ಪ್ರತಿವರ್ಷ ಕಾರ್ತಿಕ ಮಾಸದ ಕೃತಿಕಾ ನಕ್ಷತ್ರದಂದು ಸುಮಾರು 15 ಲಕ್ಷದವರೆಗೆ ಭಕ್ತರ ಸಂಖ್ಯೆ ಇರುತ್ತದೆ ಅಂದರೆ ಇದೆ ಎಂದರೆ ಈ ಕ್ಷೇತ್ರದ ಮಹಿಮೆ ಎನು ಎನ್ನುವುದು ಅರಿವಾಗದೇ ಇರದು.
ಅರುಣಾಚಲೇಶ್ವರನ ಫೋಟೊ ಗ್ಯಾಲರಿಗೆ ಇಲ್ಲಿ ಕ್ಲಿಕ್ ಮಾಡಿ.
ಚೆನ್ನೈನಿಂದ 180 ಕಿ ಮಿ ದೂರದಲ್ಲಿರುವ ತಿರುವನ್ನಾ ಮಲೈ ಎಂದು ಕರೆಯಲ್ಪಡುವ ಪಟ್ಟಣದ ಹತ್ತಿರ ಅರುಣಾಚಲೇಶ್ವರ ಎಂಬ ಶಿವಾಲಯ ಇದೆ. ಅಲ್ಲಿಯೇ ವರ್ಷದ ಎಲ್ಲ ದಿನದಂದು ಭಕ್ತರ ಆಗಮನ ಇದ್ದೇ ಇರುತ್ತದೆ.
ಅರುಣಾಚಲೇಶ್ವರ ಅಥವಾ ತಮಿಳರ ಪಾಲಿಗೆ ತೀರು ಅನ್ನಾಮಲೈಯಳ ಎಂದು ಪ್ರಚಲಿತವಾಗಿರುವ ಸುಮಾರು 2665 ಅಡಿ ಎತ್ತರದ ಬೆಟ್ಟ ಇದೆ. ಅದನ್ನೇ ಇಲ್ಲಿನವರು ಶಿವನು ಅಪರಾವತಾರ ಎಂದು ನಂಬಿದ್ದಾರೆ.
ಶಿವನ ಪಂಚಭೂತ ಶಕ್ತಿಗಳಲ್ಲಿ ಒಂದಾಗಿರು ಅಗ್ನಿ ಕ್ಷೇತ್ರ ಎಂದು ಅರುಣಾಚಲೇಶ್ವರ ಪ್ರತೀತಿ ಪಡೆದಿದೆ. ( ಕಾಂಚಿ ಮತ್ತು ತಿರುವರುರ್ ಪೃಥ್ವಿ) ಚಿದಂಬರಮ್ ( ಆಕಾಶ), ಕಾಳಹಸ್ತಿ ( ವಾಯು), ತಿರುವನೈಕಾ (ಜಲ) ಎಂದು ಪ್ರಸಿದ್ಧಿ ಪಡೆದಿವೆ.
ಅರುಣಾಚಲೇಶ್ವರನ ಫೋಟೊ ಗ್ಯಾಲರಿಗೆ ಇಲ್ಲಿ ಕ್ಲಿಕ್ ಮಾಡಿ.
|