ಮುಖ್ಯ ಪುಟ  ಧರ್ಮ > ಧಾರ್ಮಿಕ ಯಾತ್ರೆ > ಕ್ಷೇತ್ರಗಳು
 
ಜೈ ಕನಕ ದುರ್ಗಾ...ಜೈಜೈ ಕನಕ ದುರ್ಗಾ
WD
ರಾಕ್ಷಸರು ದೇವಾದಿದೇವತೆಗಳಿಂದ ವರಗಳನ್ನು ಪಡೆದು ಭೂಮಿಯ ಮೇಲಿರುವ ಋಷಿಮುನಿಗಳನ್ನು ಪೀಡಿಸಲು ಆರಂಭಿಸಿದ್ದರೆನ್ನಲಾಗಿದೆ.ಆ ಸಂದರ್ಭ ಪಾರ್ವತಿ ಶಕ್ತಿರೂಪಿಯಾಣಿಯಾಗಿ ದುಷ್ಟ ರಾಕ್ಷಸರ ಮರ್ದನ ಮಾಡಿರುವುದಾಗಿ ಪುರಾಣದಲ್ಲಿ ಹೇಳಲಾಗಿದೆ.ಶುಂಭ ಮತ್ತು ನಿಶುಂಭ ರಾಕ್ಷಸರನ್ನು ದಮನಕ್ಕಾಗಿ ಕೌಸುಕಿ ರೂಪ, ಮಹಿಷಾಸುರನ ದಮನಕ್ಕಾಗಿ ಮಹಿಷಾಸುರ ಮರ್ದಿನಿ, ದುರ್ಗಾಮಾಸುರನ ದಮನಕ್ಕಾಗಿ ದುರ್ಗೆ ಮಾತೆಯ ರೂಪವನ್ನು ತಾಳಿದ್ದಳು ಎಂದು ಪುರಾಣ ಕಥೆಗಳಲ್ಲಿ ತಿಳಿಸಲಾಗಿದೆ.ಆ ಬಳಿಕ ಭಕ್ತರ ಇಷ್ಟರ್ಥಾವನ್ನು ಪೂರೈಸಲು ತಾನು ಬೆಟ್ಟದ ಮೇಲೆ ನೆಲೆಸುವುದಾಗಿ ಕೀಲುಡು ಎನ್ನುವ ಭಕ್ತನಲ್ಲಿ ಅಭಯ ನೀಡಿರುವುದಾಗಿ ಪುರಾಣದಲ್ಲಿ ಉಲ್ಲೇಖಿಸಲಾಗಿದೆ.

ಅಂದಿನಿಂದ ಇಂದ್ರಕಿಲಾದ್ರಿಯಲ್ಲಿ ದುರ್ಗಾಮಾತೆ ನೆಲೆಸಿದ್ದು, ಮಹಿಷಾಸುರ ಮರ್ದಿನಿಯ ರೂಪವಾದ ಸಿಂಹದ ಮೇಲೆ ಸವಾರಿ, ಎಂಟು ಕೈಗಳಲ್ಲಿ ಶಸ್ತ್ರಾಸ್ತ್ರ, ಪಕ್ಕದಲ್ಲಿ ಶಿವನ ಜ್ಯೋತಿರ್ಲಿಂಗ ರೂಪದಿಂದ ಪ್ರಕಟವಾಗಿದ್ದಾಳೆ ಎಂದು ದಂತಕಥೆಗಳಲ್ಲಿ ಹೇಳಲಾಗಿದೆ.ಮತ್ತೊಂದೆಡೆ ಶಿವನ ಲಿಂಗಸ್ವರೂಪದ ಜ್ಯೋತಿರ್ಲಿಂಗಕ್ಕೆ ಬ್ರಹ್ಮ ದೇವನು ಮಲ್ಲಿಗೆ ಹೂಗಳಿಂದ ಮಲ್ಲೇಶ್ವರ ಸ್ವಾಮಿಯ ಹೆಸರಲ್ಲಿ ಪೂಜೆಗೈಯುತ್ತಿದ್ದನೆಂದೂ ಹೇಳಲಾಗಿದೆ.

ಸ್ವರ್ಗದ ವಾಸಿಯಾದ ಇಂದ್ರನು ಮಂದಿರಕ್ಕೆ ಭೇಟಿ ನೀಡಿದ ಬಳಿಕ ಇದನ್ನು ಇಂದ್ರಕಿಲಾದ್ರಿ ಪರ್ವತವೆಂದು ಕರೆಯಲಾಯಿತು.ದೇವತೆಗಳ ಸಂಪ್ರದಾಯದಂತೆ ದೇವತೆಗಳು ಎಡಭಾಗದಲ್ಲಿ ಆಸೀನರಾಗುತ್ತಾರೆ.ಆದರೆ ಇಂದ್ರಕಿಲಾದ್ರಿಯಲ್ಲಿ ದುರ್ಗಾಮಾತೆ ಮಲ್ಲೇಶ್ವರನ ಬಲಭಾಗದಲ್ಲಿ ಆಸೀನವಾಗಿದ್ದಾಳೆ. ಇದರಿಂದ ಶಕ್ತಿಗೆ ಇಂದ್ರಕಿಲಾದ್ರಿಯಲ್ಲಿ ಹೆಚ್ಚಿನ ಮಹತ್ವ ನೀಡಲಾಗಿದೆ ಎಂದು ಪುರಾಣದಲ್ಲಿ ಹೇಳಲಾಗಿದೆ.

WD
ನವರಾತ್ರಿ ಸಮಯದಲ್ಲಿ ಕನಕದುರ್ಗಾ ಮಾತೆಯನ್ನು ವಿಶೇಷವಾಗಿ ನವವಿಧದಲ್ಲಿ ಅಲಂಕರಿಸಲಾಗುತ್ತದೆ. ಬಾಲತ್ರಿಪುರ ಸುಂದರಿ, ಗಾಯತ್ರಿ, ಅನ್ನಪೂರ್ಣ, ಮಹಾಲಕ್ಷ್ಮೀ, ಸರಸ್ವತಿ, ಲಲಿತಾ ತ್ರಿಪುರ ಸುಂದರಿ, ದುರ್ಗಾದೇವಿ, ಮಹಿಷಾಸುರ ಮರ್ದಿನಿ, ಮತ್ತು ರಾಜರಾಜೇಶ್ವರಿದೇವಿ ರೂಪದಲ್ಲಿ ಅಲಂಕಾರ ಮಾಡಲಾಗುತ್ತದೆ. ವಿಜಯ ದಶಮಿಯಂದು ಭಕ್ತಾದಿಗಳು ಹಂಸಪಕ್ಷಿಯ ಆಕಾರದ ದೋಣಿಯೊಂದರಲ್ಲಿ ಕೃಷ್ಣಾ ನದಿಯನ್ನು ಸುತ್ತು ಹಾಕಿ "ತೆಪ್ಪೋತ್ಸವಂ" ಆಚರಿಸುತ್ತಾರೆ. ಒಂಬತ್ತು ದಿನಗಳ ಕಾಲ ನಡೆಯುವ ಈ ಆಚರಣೆ ಆಯುಧಪೂಜೆಯಂದು ಭಕ್ತರು ಶಸ್ತ್ರಾಸ್ತ್ರಗಳನ್ನು ಪೂಜಿಸುತ್ತಾರೆ.

ಇಂದ್ರಕಿಲಾದ್ರಿ ಕನಕದುರ್ಗಾ ಮಾತೆಯ ಮಂದಿರಕ್ಕೆ ಭೇಟಿ ನೀಡುವ ಭಕ್ತರ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಿದ್ದು, ವಾರ್ಷಿಕ ಆದಾಯ 40 ಕೋಟಿ ರೂ.ಗಳಿಗೆ ಬಂದು ತಲುಪಿದೆ. ಪವಿತ್ರಗ್ರಂಥಗಳು, ಅನೇಕ ಶಿವಲೀಲೆಗಳು, ಶಕ್ತಿ ಮಹಿಮೆಗಳ ಪ್ರಮುಖ ತಾಣವಾಗಿದೆ. ಆಧ್ಯಾತ್ಮಿಕ ಮಹತ್ವವನ್ನು ಸಾರುವ ಐತಿಹಾಸಿಕ, ಪ್ರಾಚೀನ ಸ್ಥಳವಾಗಿದ್ದರಿಂದ ನೂರಾರು ವರ್ಷಗಳಿಂದ ಭಕ್ತರು ಲಕ್ಷಾಂತರ ಸಂಖ್ಯೆಯಲ್ಲಿ ದರ್ಶನಕ್ಕಾಗಿ ಆಗಮಿಸುತ್ತಿದ್ದಾರೆ.

ತಲುಪುವುದು ಹೇಗೆ:

ವಿಜಯವಾಡಾ ನಗರದ ಹೃದಯಭಾಗದಲ್ಲಿದ್ದು, ರೈಲ್ವೆನಿಲ್ದಾಣದಿಂದ ಕೇವಲ 10 ನಿಮಿಷಗಳಲ್ಲಿ ತಲುಪಬಹುದಾಗಿದೆ. ವಿಜಯವಾಡ ಹೈದ್ರಾಬಾದ್‌ನಿಂದ 275 ಕಿ.ಮಿ. ದೂರವಿದ್ದು, ದೇಶದ ಯಾವುದೇ ಮೂಲೆಯಿಂದ ರಸ್ತೆ, ರೈಲು ಮತ್ತು ವಿಮಾನಯಾನದ ಮೂಲಕ ಸುಲಭವಾಗಿ ತಲುಪಬಹುದಾಗಿದೆ.
ವೀಡಿಯೋ ವೀಕ್ಷಿಸಿ
 << 1 | 2   
ಫೋಟೋಗ್ಯಾಲರಿ
ಫೋಟೋ ಗ್ಯಾಲರಿಗಾಗಿ ಇಲ್ಲಿ ಕ್ಲಿಕ್ ಮಾಡಿ.
ಮತ್ತಷ್ಟು
ಪರಮ ಪಾವನೆ ಭಕ್ತವತ್ಸಲೆ ಕೊಲ್ಲೂರು ಶ್ರೀಮೂಕಾಂಬಿಕೆ
ಗುಜರಾತಿನ ಅಂಬಾಭವಾನಿ ಮಂದಿರ
ಖ್ವಾಜಾ-ಮೊಯಿನುದ್ದಿನ್ ಚಿಸ್ತಿ
ಮನದಲ್ಲಿ ನೆನೆದು ನೋಡಿ ಅರುಣಾಚಲೇಶ್ವರನನ್ನ
ರಾಜಸ್ಥಾನದ ಜೈನ ಪುಣ್ಯಕ್ಷೇತ್ರ: ಮಹಾವೀರ ಮಂದಿರ
ಮುಂಬಯಿಯ ಶ್ರೀ ಸಿದ್ಧಿವಿನಾಯಕ ಮಂದಿರ