ಮುಖ್ಯ ಪುಟ  ಧರ್ಮ > ಧಾರ್ಮಿಕ ಯಾತ್ರೆ > ಕ್ಷೇತ್ರಗಳು
 
ಹನುಮಂತನ ನೂರಾರು ರೂಪಗಳು
WD
"ರಾಮಚರಿತ ಮಾನಸ" ಕೃತಿಯಲ್ಲಿ ಬರುವ ಏಳು ಅಧ್ಯಾಯಗಳನ್ನು ಆಧರಿಸಿ, ಹಂಗೆರಿ ಮೂಲದ ಚಿತ್ರ ಕಲಾವಿದ ಹುಮಿಲ್ ರೊಜೆಲಿಯಾ ಎಂಬವರು ರಾಧಿಕಾಪ್ರಿಯ ಎಂಬ ಕುಂಚನಾಮದಲ್ಲಿ ಚಿತ್ರಿಸಿದ ಏಳು ಅದ್ಭುತ, ಸುಂದರ ಚಿತ್ರಕಲಾಕೃತಿಗಳು ಜನಮನ ಸೆಳೆಯುತ್ತವೆ. 1864ರಲ್ಲಿ ಮಹಾರಾಜ ರಣಜಿತ್ ಸಿಂಗ್ ಹೊರತಂದಿದ್ದ ಹನುಮನ ಚಿತ್ರವಿರುವ ನಾಣ್ಯಗಳು ಇಲ್ಲಿದ್ದು, ಥೇಟ್ ಈಗಿನ ಕೋತಿಯ ರೀತಿಯಲ್ಲೇ ಗೋಚರಿಸುವ ಹನುಮಂತನ ಅತ್ಯಂತ ಅಪರೂಪದ ವಿಗ್ರಹವೊಂದು ಗಮನ ಸೆಳೆಯುತ್ತದೆ. ಮತ್ತೊಂದು ವಿಗ್ರಹದಲ್ಲಿ ಹನುಮಂತನು ಧ್ವಜ ಹಿಡಿದುಕೊಂಡು ಒಂಟೆ ಸವಾರಿ ಮಾಡುತ್ತಿದ್ದರೆ, ಬಾಲ ಹನುಮನ ವಿಗ್ರಹವಂತೂ ಪ್ರೀತಿ ಸ್ಫುರಿಸುವಂತಿದೆ.

ರಾಮ ಮತ್ತು ಹನುಮರ ಕುರಿತ ಸಾಹಿತ್ಯವಿರುವ ಭಂಡಾರವೇ ಇಲ್ಲಿದೆ. ಪ್ರಕಾಶನ ಸಂಸ್ಥೆಯೊಂದಕ್ಕೆ ಸೇರಿರುವ ಸುನಿಲ್, 7ನೇ ತರಗತಿಯಲ್ಲಿದ್ದಾಗಲೇ ಭಗವಾನ್ ಹನುಮನಿಂದ ಪ್ರಭಾವಿತರಾಗಿದ್ದರು. ಕೆಲವು ವರ್ಷಗಳ ಹಿಂದೆ, ಮೂಗಿನಲ್ಲಿ ರಕ್ತ ಸೋರಿಕೆಗೆ ಕಾರಣವಾಗಿದ್ದ ಅಪಘಾತವೊಂದು ಅವರ ಬದುಕಿನ ದಿಕ್ಕನ್ನೇ ಬದಲಿಸಿತ್ತು. ಅವರು ಜೈ ಬಜರಂಗ ಹೆಸರಿನ ಚಾರಿಟೇಬಲ್ ಟ್ರಸ್ಟ್ ಒಂದನ್ನೂ ಸ್ಥಾಪಿಸಿದ್ದಾರೆ.

WD
ಹನುಮನ ಕುರಿತ ನಾಲ್ಕು ಪುಸ್ತಕಗಳಿಗೆ ವಿಷಯವಸ್ತು ಒದಗಿಸಿರುವ ಅವರು, ಅವುಗಳ ಪ್ರಕಾಶನಕ್ಕೂ ಕಾರಣರಾಗಿದ್ದಾರೆ. ಅವರ "ತುಳಸಿದಾಸ ಹನುಮಾನ್ ಸಾಧನಾ ಶಬ್ದಮಣಿ" ಎಂಬ ಪುಸ್ತಕ ಅತ್ಯಂತ ಹೆಚ್ಚು ಮಾರಾಟವಾಗಿದೆ. ಇದಲ್ಲದೆ, "ಹನುಮಾನ್ ದರ್ಶನ್", "ಸುಂದರ ಕಾಂಡ ಸುಂದರ ಕ್ಯೋಂ" "ಭಕ್ತೋಂ ಕಾ ದೃಷ್ಟಿಕೋನ್" ಮತ್ತು "ವರ್ಲ್ಡ್ ಆಫ್ ಲಾರ್ಡ್ ಹನುಮಾನ್" ಕೃತಿಗಳು ಪ್ರಸಿದ್ಧವಾಗಿವೆ.

ಹನುಮನಿಗೆ ಸಂಬಂಧಿಸಿದ ಯಾವುದೇ ಅಪರೂಪದ ವಸ್ತುಗಳು ಅಥವಾ ಮಾಹಿತಿ ದೊರೆತಲ್ಲಿ ದಯವಿಟ್ಟು ಅದನ್ನು ತಮಗೆ ಕಳುಹಿಸಬಹುದು ಅವರು ಭಕ್ತಾದಿಗಳಿಗೆ ವಿನಂತಿ ಮಾಡಿದ್ದಾರೆ. ಈ ಸೊತ್ತುಗಳು ವಸ್ತು ಸಂಗ್ರಹಾಲಯದಲ್ಲಿ ಸುರಕ್ಷಿತವಾಗಿರುತ್ತವೆ. ಇದು ಪ್ರತಿ ಭಾನುವಾರ ಬೆಳಿಗ್ಗೆ 11 ಗಂಟೆಯಿಂದ ಮಧ್ಯಾಹ್ನ 1 ಗಂಟೆವರೆಗೆ ಭಕ್ತರ ಸಂದರ್ಶನಕ್ಕೆ ತೆರೆದಿರುತ್ತದೆ.

ವಿಳಾಸ
ಬಜರಂಗ ನಿಕುಂಜ್, 14/1192, ಇಂದಿರಾ ನಗರ, ಲಖ್ನೋ (ಉತ್ತರ ಪ್ರದೇಶ).
ಫೋನ್ ನಂ.- 0522-2711172, ಮೊಬೈಲ್ ನಂ.- 094150 11817
ವೀಡಿಯೋ ವೀಕ್ಷಿಸಿ
 << 1 | 2   
ಫೋಟೋಗ್ಯಾಲರಿ
ಫೋಟೋ ಗ್ಯಾಲರಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಮತ್ತಷ್ಟು
ಸಂಗೀತ ಸಾಮ್ರಾಟ್ ಬಟೂಕ ಭೈರವ  
ಜೈ ಕನಕ ದುರ್ಗಾ...ಜೈಜೈ ಕನಕ ದುರ್ಗಾ  
ಪರಮ ಪಾವನೆ ಭಕ್ತವತ್ಸಲೆ ಕೊಲ್ಲೂರು ಶ್ರೀಮೂಕಾಂಬಿಕೆ  
ಗುಜರಾತಿನ ಅಂಬಾಭವಾನಿ ಮಂದಿರ  
ಖ್ವಾಜಾ-ಮೊಯಿನುದ್ದಿನ್ ಚಿಸ್ತಿ  
ಮನದಲ್ಲಿ ನೆನೆದು ನೋಡಿ ಅರುಣಾಚಲೇಶ್ವರನನ್ನ