ಮುಖ್ಯ ಪುಟ > ಧರ್ಮ > ಧಾರ್ಮಿಕ ಯಾತ್ರೆ > ಕ್ಷೇತ್ರಗಳು
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಶಿರ್ಡಿ ಸಾಯಿಬಾಬಾ ಮಂದಿರ
WD
ಶ್ರೀ ಸಾಯಿಬಾಬಾ ಭಾರತದಲ್ಲೇ ಎಂದೂ ಕಂಡಿರದ ಮಹಾನ್ ಸಂತರಲ್ಲಿ ಒಬ್ಬರೆಂದು ಹೆಸರುಗಳಿಸಿದ್ದು, ಅತ್ಯದ್ಭುತ ಶಕ್ತಿಗಳಿಂದ ಕೂಡಿ ದೇವರ ಅವತಾರ ಎಂದು ಪೂಜಿಸಲ್ಪಡುತ್ತಾರೆ.(ಸಾಯಿ ಎಂದರೆ ಸಾಕ್ಷಾತ್ ಈಶ್ವರ ಎಂದೇ ಅರ್ಥ). ಈ ನಿಗೂಢ ಫಕೀರ ಶಿರ್ದಿಯಲ್ಲಿ ಯುವಕನಾಗಿ ಪ್ರತ್ಯಕ್ಷನಾಗಿ ಜೀವಮಾನವಿಡೀ ಅಲ್ಲೆ ನೆಲೆಸಿದರು.

ಅವರನ್ನು ಭೇಟಿ ಮಾಡಿದ ಭಕ್ತಾದಿಗಳ ಜೀವನವನ್ನೇ ಪರಿವರ್ತಿಸಿದರು. 1918ರಲ್ಲಿ ಅವರು ಸಮಾಧಿಯಾದ ನಂತರವೂ ಅವರ ಪ್ರೀತಿಯಿಂದ ಪುಳಕಿತರಾದ, ಸಂಕಷ್ಟದ ಸಂದರ್ಭದಲ್ಲಿ ಅವರನ್ನು ಪ್ರಾರ್ಥಿಸಿ ಅವರ ಆಶೀರ್ವಾದಕ್ಕಾಗಿ ಹಂಬಲಿಸುವ ಜನರ ಜೀವನಕ್ಕೆ ಬೆಳಕು ನೀಡುವ ಕ್ರಿಯೆ ಮುಂದುವರಿಸಿದರು.

WD
ತಮ್ಮ ಉದ್ದೇಶ ಯಾವುದೇ ಭೇದಭಾವವಿಲ್ಲದೇ ಆಶೀರ್ವಾದ ನೀಡುವುದಾಗಿದೆ ಎಂದು ಬಾಬಾ ಹೇಳಿದ್ದರು. ರೋಗಿಗಳನ್ನು ಗುಣಪಡಿಸುವ, ಜೀವವುಳಿಸುವ, ನಿರ್ಗತಿಕರನ್ನು ರಕ್ಷಿಸುವ, ಅವಘಡಗಳನ್ನು ನಿವಾರಿಸುವ, ಮಕ್ಕಳನ್ನು ಕರುಣಿಸುವ, ಆರ್ಥಿಕ ಲಾಭ ನೀಡುವ, ಜನರಲ್ಲಿ ಪರಸ್ಪರ ಸಾಮರಸ್ಯ ಕಲ್ಪಿಸುವ, ಅಂತಿಮೋಪಾಯವಾಗಿ ತಮಗೆ ಮೊರೆಹೋದವರಿಗೆ ಧಾರ್ಮಿಕ ವಿಕಾಸ ಮತ್ತು ಪರಿವರ್ತನೆ ಉಂಟುಮಾಡುವ ಅನೇಕ ವಿಧಾನಗಳ ಮೂಲಕ ಅವನ್ನು ಬಾಬಾ ರುಜುವಾತು ಮಾಡಿದ್ದರು.

ಬಾಬಾ ಅವರ ಸಮಕಾಲೀನ ಭಕ್ತರೊಬ್ಬರು “ತಮ್ಮ ಪ್ರತಿಯೊಂದು ನುಡಿ ಮತ್ತು ನಡೆಯಿಂದ ಸಾಧಕರ ಮಾರ್ಗಕ್ಕೆ ಬೆಳಕು ತೋರುವ ಮಹಾನ್ ಸಾಕಾರಮೂರ್ತಿ” ಎಂದು ಬಾಬಾರನ್ನು ಬಣ್ಣಿಸಿದ್ದರು. ಅವರ ಭಕ್ತರಿಗೆ ಬಾಬಾ ದೇವರ ಅಪರಾವತಾರ. ಅದೊಂದು ಕಾಲ್ಪನಿಕವಲ್ಲದ ಅನುಭವದ ವಿಷಯ.

WD
ಶಿರ್ಡಿ ಗ್ರಾಮದ ಹೃದಯಭಾಗದಲ್ಲಿ 200 ಚದರ ಮೀ. ವಿಸ್ತೀರ್ಣದಲ್ಲಿರುವ ಶ್ರೀಸಾಯಿಬಾಬಾ ದೇವಸ್ಥಾನ ವಿಶ್ವಾದ್ಯಂತ ಆಗಮಿಸುವ ಭಕ್ತಾದಿಗಳಿಂದ ಪ್ರಮುಖ ಯಾತ್ರಾ ಕೇಂದ್ರವಾಗಿದೆ. ಸರಾಸರಿ ದಿನನಿತ್ಯ ಶಿರ್ಡಿ ಗ್ರಾಮಕ್ಕೆ 20,000 ಭಕ್ತರು ಶ್ರೀ ಸಾಯಿಬಾಬಾನ ದರ್ಶನಕ್ಕೆ ಭೇಟಿ ನೀಡುತ್ತಾರೆ. ಹಬ್ಬದ ಋತುವಿನಲ್ಲಿ ಒಂದು ಲಕ್ಷಕ್ಕಿಂತ ಹೆಚ್ಚು ಭಕ್ತಾದಿಗಳು ಮಂದಿರಕ್ಕೆ ಭೇಟಿ ನೀಡುತ್ತಾರೆ. 1998-99ರಲ್ಲಿ ದೇವಸ್ಥಾನ ಆವರಣವನ್ನು ನವೀಕರಣಗೊಳಿಸಲಾಯಿತು. ಈಗ ದರ್ಶನ ಮಾರ್ಗ, ಪ್ರಸಾದ(ಬೋಜನ, ರಾತ್ರಿಯೂಟ), ದಾನದ ಕೌಂಟರ್, ಪ್ರಸಾದದ ಕೌಂಟರ್, ಕ್ಯಾಂಟೀನ್, ರೈಲ್ವೆ ಮೀಸಲು ಕೌಂಟರ್, ಪುಸ್ತಕದ ಮಳಿಗೆ ಮುಂತಾದ ಸೌಲಭ್ಯಗಳಿಂದ ಸಜ್ಜುಗೊಂಡಿದೆ. ಯಾತ್ರಿಕರಿಗೆ ಸಾಯಿಬಾಬ ಸಂಸ್ಥಾನವು ವಸತಿ ಸೌಲಭ್ಯಗಳನ್ನು ಕೂಡ ಒದಗಿಸುತ್ತದೆ.


ತಲುಪುವುದು ಹೇಗೆ:

ಬಸ್ ಸೌಕರ್ಯ

ಮುಂಬೈನಿಂದ 161 ಕಿಮೀ, ಪುಣೆಯಿಂದ 100 ಕಿಮೀ, ಹೈದರಾಬಾದ್ 360 ಕಿಮೀ, ಮನ್ಮಾಡ್ 29 ಕಿಮೀ, ಔರಂಗಾಬಾದ್ 66, ಭೋಪಾಲ್ 277 ಕಿಮೀ ಮತ್ತು ಬರೋಡದಿಂದ 202 ಕಿಮೀ ದೂರವಿರುವ ಶಿರ್ಡಿಗೆ ನೇರಬಸ್ ಸೌಕರ್ಯವಿದೆ.

ರೈಲಿನ ಮೂಲಕ:
ಹತ್ತಿರದ ರೈಲ್ವೆ ನಿಲ್ದಾಣವು ಮನ್ಮಾಡ್ ಆಗಿದ್ದು, ಕೇಂದ್ರ ರೈಲ್ವೆಯ ಮನ್ಮಾಡ್-ದಾಂಡ್ ವಿಭಾಗದಲ್ಲಿದೆ. ಮುಂಬೈ, ಪುಣೆ, ದೆಹಲಿ, ವಾಸ್ಕೊನಿಂದ ಮನ್ಮಾಡ್ ರೈಲು ಸೌಲಭ್ಯವಿದೆ.

ವಿಮಾನದ ಮೂಲಕ:

ಮುಂಬೈ ಮತ್ತು ಪುಣೆ ಹತ್ತಿರದ ವಿಮಾನ ನಿಲ್ದಾಣಗಳು.
ವೀಡಿಯೋ ವೀಕ್ಷಿಸಿ
ಮತ್ತಷ್ಟು
ಜೈನ ಪುಣ್ಯಕ್ಷೇತ್ರ ಮೋಹನ್‌ಖೇಡಾ  
ವಲಿಯ ಕೊಯಿಕಲ್ ಅಯ್ಯಪ್ಪ ಸ್ವಾಮಿ ಮಂದಿರ  
ಮಾನಸ ಸರೋವರ ಯಾತ್ರೆ  
ಮುಟ್ಟಮ್‌ನ ಸೆಂಟ್ ಮೇರಿ ಚರ್ಚ್  
ಮಸೀದಿಗಳ ಕಿರೀಟ ತಾಜುಲ್ ಮಸೀದಿ  
ಪವಾಗಢದ ಶಕ್ತಿಪೀಠ