ಮುಖ್ಯ ಪುಟ > ಧರ್ಮ > ಧಾರ್ಮಿಕ ಯಾತ್ರೆ > ಕ್ಷೇತ್ರಗಳು
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಕದರಹಿತ ಮಾಯೆ ಶನಿ ಶಿಂಗ್ಣಾಪುರ
ದೀಪಕ್ ಖಂಡಗಲೆ

WD
ಈ ಗ್ರಾಮ ಶನೀಶ್ವರ ದೇವಾಲಯದಿಂದಾಗಿ ಹೆಸರುವಾಸಿ. ಇಲ್ಲಿನ ವಿಶೇಷತೆ ಅಂದರೆ, ಈ ಊರಿನ ಯಾವ ಬಾಗಿಲಿಗೂ ಬೀಗವಿಲ್ಲ. ಅದು ಮನೆ ಇರಲಿ, ಅಂಗಡಿ ಇರಲಿ, ಇಲ್ಲ ಬ್ಯಾಂಕೇ ಆಗಿರಲಿ. ಈ ಗ್ರಾಮವು ದೇವರಿಂದ ರಕ್ಷಿತವಾದುದು ಮತ್ತು ಇಲ್ಲಿಂದ ಏನಾದರೂ ಕದ್ದರೆ ಆ ಕಳ್ಳ ಗಡಿದಾಟುವ ಮುನ್ನವೇ ಸಾಯುತ್ತಾನಂತೆ! ನೀವು ನಂಬಿದರೆ ನಂಬಿ ಬಿಟ್ಟರೆ ಬಿಡಿ, ಈ ಗ್ರಾಮದಲ್ಲಿ ಕಳ್ಳತನವಾದ ದಾಖಲೆಗಳು ಇಲ್ಲ.

ಮಹಾರಾಷ್ಟ್ರದ ನಾಸಿಕ್ ಸಮೀಪ ಇರುವ ಶನಿ-ಶಿಂಗ್ಣಾಪುರ ಸುಪ್ರಸಿದ್ಧ ಧಾರ್ಮಿಕ ಸ್ಥಳ. ಇದನ್ನು ಕದರಹಿತ ಮಾಯೆ ಎಂದೂ ಕರೆಯಲಾಗುತ್ತದೆ. ಇಲ್ಲಿನ ಇನ್ನೂ ಒಂದು ವೈಶಿಷ್ಠ್ಯವೆಂದರೆ, ಇಲ್ಲಿನ ನಿರ್ದಿಷ್ಟವಾದ ದೇವರ ಪ್ರತಿಮೆಯಾಗಲಿ, ಮೂರ್ತಿಯಾಗಲಿ ಇಲ್ಲ, ಆದರೆ ಒಂದು ಕಲ್ಲಿನ ಸ್ತಂಭ ಇದೆ. ಇದನ್ನು ಅಪರಿಮಿತ ಭಕ್ತಿ ಗೌರವಗಳಿಂದ ಇಲ್ಲಿಗೆ ಆಗಮಿಸುವ ಜನತೆ ಪೂಜಿಸುತ್ತಾರೆ.
WD


ಇಲ್ಲಿನ ಇನ್ನೊಂದು ವಿಶೇಷತೆ ಎಂದರೆ, ಇಲ್ಲಿ ದೇವರಿಗೆ ಪೂಜೆಮಾಡಲು ಯಾವುದೇ ಪೂಜಾರಿ ಇಲ್ಲ. ದೇವಾಲದೊಳಗೆ ತೆರಳುವ ಗಂಡಸರು ದೇವಾಲಯದ ಬಳಿ ಇರುವ ಪವಿತ್ರ ನೀರಿನಲ್ಲಿ ತಲೆಗೆ ಸ್ನಾನ ಮಾಡಿ ಕೇಸರಿ ವಸ್ತ್ರ ತೊಡಬೇಕು. ಪ್ರಾರ್ಥನೆಗಳನ್ನು ಪಠಿಸುತ್ತಾ ಕಲ್ಲಿನ ಸ್ತಂಭಕ್ಕೆ ಪ್ರದಕ್ಷಿಣೆ ಹಾಕುವುದೇ ಪೂಜೆ ಸಲ್ಲಿಸುವ ವಿಧಾನ. ಪವಿತ್ರ ಕಲ್ಲಿನ ಸ್ತಂಭಕ್ಕೆ ಭಕ್ತರು ಅಭಿಷೇಕ ನೆರವೇರಿಸುತ್ತಾರೆ. ವಿವಿಧ ದ್ರವ್ಯಗಳು, ನೀರು ಮತ್ತು ಎಳ್ಳೆಣ್ಣೆಯ ಅಭಿಷೇಕವನ್ನು ಮಾಡಲಾಗುತ್ತದೆ. ಶನಿ ಅಮವಾಸ್ಯೆಯಂದು ಇಲ್ಲಿ ಸಾವಿರಾರು ಮಂದಿ ಸೇರುತ್ತಾರೆ. ಪ್ರಸಿದ್ಧ ವ್ಯಕ್ತಿಗಳೂ ಆ ದಿನದಂದು ಕ್ಷೇತ್ರಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸುತ್ತಾರೆ.

WD
ಈ ಊರಿನಲ್ಲಿರುವ ಯಾವುದೇ ಮನೆ ಅಥವಾ ಅಂಗಡಿಗಳಿಗೆ ಬಾಗಿಲುಗಳೇ ಇಲ್ಲ. ಇಲ್ಲಿ ಕಳ್ಳತನವಾಗುವುದಿಲ್ಲ. ಒಂದೊಮ್ಮೆ ಯಾರಾದರೂ ಕಳ್ಳತನಕ್ಕೆ ಯತ್ನಿಸಿದರೆ ಅಂತಹವರು ಬದುಕುವುದೂ ಇಲ್ಲ. ಊರಿನ ಗಡಿ ದಾಟುತ್ತಲೆ ಸತ್ತು ಬೀಳುತ್ತಾರೆ ಎಂದು ಸ್ಥಳೀಯರು ಹೇಳುತ್ತಾರೆ. ವಸ್ತುಗಳನ್ನು ಕಳಕೊಂಡವರು ತಮ್ಮ ವಸ್ತುಗಳನ್ನು ಮರಳಿ ಪಡೆದ ಉದಾಹರಣೆಗಳು ಇವೆ. ಈ ಊರನ್ನು ಶವಿದೇವರು ಕಾಪಾಡುತ್ತಾರೆ ಎಂಬುದು ನಂಬುಗೆ. ಶಿಂಗ್ಣಾಪುರದಲ್ಲಿ ಯಾರಿಗಾದರೂ ಹಾವುಕಚ್ಚಿದಲ್ಲಿ, ಅವರನ್ನು ದೇವಾಲಯಕ್ಕೆ ಕರೆತಂದು ದೇವರ ಎದುರು ಕೆಲವು ಧಾರ್ಮಿಕವಿಧಿಗಳನ್ನು ನಡೆಸಿದಲ್ಲಿ ವಿಷವಿಳಿಯುತ್ತದೆ ಎಂಬ ನಂಬುಗೆಯೂ ಇದೆ.

ಶನೀಶ್ವರದ ಪಶ್ಚಿಮಕ್ಕಿರುವ ಊರು ದೇವಗಡ, ದತ್ತ ದೇವಾಲಯದಿಂದಾಗಿ ಪ್ರಸಿದ್ಧವಾಗಿದೆ. ಈ ದೇವಾಲಯವು 24 ಗಂಟೆಗಳ ಕಾಲವೂ ಭಕ್ತರಿಗಾಗಿ ತೆರೆದಿರುತ್ತದೆ. ಮಹಾರಾಷ್ಟ್ರದ ಇನ್ನೊಂದು ಪವಿತ್ರ ಸ್ಥಳ ಶಿರ್ಡಿಯೂ ಶನಿ-ಶಿಂಗ್ಣಾಪುರಕ್ಕೆ ಸಮೀಪದಲ್ಲಿದೆ.
ವೀಡಿಯೋ ವೀಕ್ಷಿಸಿ
1 | 2  >>  
ಫೋಟೋಗ್ಯಾಲರಿ
ಶನಿ ಶಿಂಗ್ಣಾಪುರ ದೇವಾಲಯದ ಚಿತ್ರಗಳು
ವೆಬ್‌ದುನಿಯಾ ಚರ್ಚೆ
ನಿಮ್ಮ ಅಭಿಪ್ರಾಯವನ್ನು ಇಲ್ಲಿ ಚರ್ಚಿಸಿ
ಮತ್ತಷ್ಟು
ವಾರಣಾಸ್ಯಮ್ ಚಃ ವಿಶ್ವೇಶ್ವರಮ್  
ಮಹಿಳೆಯರ ಶಬರಿಮಲೆ- ಅಟ್ಟುಕಲ್ ಭಗವತಿ ಮಂದಿರ  
ಶಕ್ತಿಮಾತೆ ತುಳಜಾ ಭವಾನಿ  
ಶ್ರೀದೇವಿ ಸರಸ್ವತಿಯ ಐತಿಹಾಸಿಕ ಮಂದಿರ- ಭೋಜಶಾಲಾ  
ಬಾವನ್‌ಗಜದ ಜೈನ ಸಿದ್ಧ ಕ್ಷೇತ್ರ  
ಏಳು ಬೆಟ್ಟದೊಡೆಯ ಶ್ರೀ ವೆಂಕಟೇಶ