ಮುಖ್ಯ ಪುಟ > ಧರ್ಮ > ಧಾರ್ಮಿಕ ಯಾತ್ರೆ > ಕ್ಷೇತ್ರಗಳು
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಕದರಹಿತ ಮಾಯೆ ಶನಿ ಶಿಂಗ್ಣಾಪುರ
WD
ಪೂಜಾ ವಿಧಾನ
ಶಿಂಗ್ಣಾಪುರದಲ್ಲಿ ಶನಿದೇವರಿಗೆ ಪೂಜೆ ಸಲ್ಲಿಸಬೇಕಿರುವವರು, ತಲೆಗೆ ಸ್ನಾನಮಾಡಿ ಒದ್ದೆ ಬಟ್ಟೆಯಲ್ಲಿ ಶನಿಮಹಾರಾಜನ ಸ್ವಯಂಭೂ ಮೂರ್ತಿಗೆ ಪೂಜೆಸಲ್ಲಿಸಬೇಕು. ಬಳಿಕ ಪ್ರದಕ್ಷಿಣೆ ಹಾಕುತ್ತಾ ಪ್ರಾರ್ಥನೆ ಸಲ್ಲಿಸುತ್ತಾರೆ. ಅದಾದ ಬಳಿಕ ಬಳಿಯಲ್ಲಿರುವ ಪವಿತ್ರ ಬಾವಿಯಿಂದ ತಂದ ನೀರು ಹಾಗೂ ತೈಲದಿಂದ ಅಭಿಷೇಕ ಮಾಡುತ್ತಾರೆ. ಇಲ್ಲಿ ಯಾವುದೇ ಬಲಿದಾನಗಳು ಇರುವುದಿಲ್ಲ. ಭಕ್ತಾದಿಗಳಲ್ಲಿ ಗಂಡಸರು ಒದ್ದೆ ಬಟ್ಟೆಯಲ್ಲಿ ದೇವರ ಪೀಠದ ಸಮೀಪಕ್ಕೆ ತೆರಳಬಹುದು. ಆದರೆ ಸ್ತ್ರೀಯರು ಕಟ್ಟೆಯ ಸಮೀಪಕ್ಕೆ ತೆರಳುವಂತಿಲ್ಲ. ದೂರದಿಂದಲೇ ಪ್ರಾರ್ಥನೆ ಸಲ್ಲಿಸಬೇಕು. ಇಲ್ಲಿರುವ ಇನ್ನೊಂದು ಬಾವಿಯಿಂದ ಶನಿಮಹಾರಾಜನ ಧಾರ್ಮಿಕ ವಿಧಿಗಳಿಗೆ ಮಾತ್ರ ನೀರನ್ನು ಬಳಸಲಾಗುತ್ತದೆ. ಈ ಬಾವಿಯನ್ನು ಮಹಿಳೆಯರು ಬಳಸುವಂತಿಲ್ಲ.

ಇಲ್ಲಿಗೆ ಭೇಟಿ ನೀಡುವ ಭಕ್ತರು 'ಸಂಕೇತ್' ಎನ್ನುವ ಕೆಲವು ನಿಯಮಗಳನ್ನು ಪಾಲಿಸಬೇಕು.
WD

*ಇಲ್ಲಿಗೆ ಪ್ರವೇಶಿಸುವ ಭಕ್ತರು ಶುಚೀರ್ಭೂತರಾಗಿರಬೇಕು. ಭಕ್ತರ ಸ್ನಾನ ಹಾಗೂ ಪರಿಶುದ್ಧತೆಗಾಗಿ ಇಲ್ಲಿ ಸಾಕಷ್ಟು ಸೌಕರ್ಯಗಳು ಲಭಿಸುತ್ತವೆ.

*ದೇವರ ದರ್ಶನದ ವೇಳೆಗೆ ತಲೆಮೇಲೆ ಯಾವುದೇ ಬಟ್ಟೆ ಅಥವಾ ಟೊಪ್ಪಿಗೆಯನ್ನು ಧರಿಸಿರಬಾರದು.

* ಭಕ್ತರು ಒದ್ದೆ ಬಟ್ಟೆಯಲ್ಲೇ ದೇವರಿಗೆ ಅಭಿಷೇಕ ನಡೆಸಬೇಕು. ಶನಿವಾರ ಹಾಗೂ ಸೋಮವಾರಗಳಂದು ಅಭಿಷೇಕಕ್ಕೆ ಇಲ್ಲಿ ಬ್ರಾಹ್ಮರು ಲಭ್ಯ.

* ಅಭಿಷೇಕಕ್ಕಾಗಿ ಭಕ್ತರು ಎಣ್ಣೆ, ತೆಂಗಿನ ಕಾಯಿ, ಒಣಕರ್ಜೂರ, ಅಡಿಕೆ, ಅಕ್ಕಿ, ಅರಿಶಿನ-ಕುಂಕುಮ, ಗುಲಾಬಿ, ಬೇವು, ಸಕ್ಕರೆ, ನೀಲಿ ಹೂವುಗಳು, ಕಪ್ಪುಬಟ್ಟೆ, ಮೊಸರು ಮತ್ತು ಹಾಲು ಇತ್ಯಾದಿಗಳನ್ನು ಬಳಸುತ್ತಾರೆ.

* ತನ್ನ ಸಂಕಟ ಹರಣಕ್ಕಾಗಿ ಭಕ್ತರು ಕಾವಡಿ, ಬಿಬ್ಬ, ಮೊಳೆ, ಪಿನ್ನು ಅಥವಾ ಅಕ್ಕಿ ಮೊದಲಾದುವುಗಳನ್ನು ದೇವರಿಗೆ ಒಪ್ಪಿಸುತ್ತಾರೆ.

*ತಮ್ಮ ಇಚ್ಛೆಗಳು ನೆರವೇರಿದ ಬಳಿಕದ ಅಭಿಷೇಕವನ್ನು ನವಸ್ ಎಂದು ಕರೆಯಲಾಗುತ್ತದೆ. ಇದಕ್ಕೆ ಬೆಳ್ಳಿನಾಣ್ಯಗಳು, ತ್ರಿಶೂಲ, ಶ್ರಿಫಲ ಅಥವಾ ಗಾಮೇಲದಂತಹ ಕಬ್ಬಿಣದ ವಸ್ತುಗಳು ಅಥವಾ ಕುದುರೆ, ಹಸು, ಕೋಣ ಮುಂತಾದ ಪ್ರಾಣಿಗಳನ್ನು ಒಪ್ಪಿಸುತ್ತಾರೆ.

WD
ಶನಿ ಶಿಂಗ್ಣಾಪುರಕ್ಕೆ ತಲುಪುವ ದಾರಿ ದಿಕ್ಸೂಚಿ

ವಿಮಾನ ಮುಖಾಂತರವಾದರೆ
ಹತ್ತಿರದ ವಿಮಾನ ನಿಲ್ದಾಣವೆಂದರೆ, ಪುಣೆ. ಇಲ್ಲಿಂದ ಶನಿಶಿಂಗ್ಣಾಪುರ 160 ಕಿ.ಮೀ

ರೈಲುದಾರಿ
ಸಮೀಪದ ರೈಲ್ವೇನಿಲ್ದಾಣ ಶ್ರೀರಾಂಪುರ

ರಸ್ತೆಹಾದಿ
ಮುಂಬೈ-ಪುಣೆ-ಅಹ್ಮದಾನಗರ್-ಶನಿ ಶಿಂಗ್ಣಾಪುರ. ಅಂದಾಜು 330 ಕಿ.ಮೀ
ವೀಡಿಯೋ ವೀಕ್ಷಿಸಿ
<< 1 | 2 
ಫೋಟೋಗ್ಯಾಲರಿ
ಶನಿ ಶಿಂಗ್ಣಾಪುರ ದೇವಾಲಯದ ಚಿತ್ರಗಳು
ವೆಬ್‌ದುನಿಯಾ ಚರ್ಚೆ
ನಿಮ್ಮ ಅಭಿಪ್ರಾಯವನ್ನು ಇಲ್ಲಿ ಚರ್ಚಿಸಿ
ಮತ್ತಷ್ಟು
ವಾರಣಾಸ್ಯಮ್ ಚಃ ವಿಶ್ವೇಶ್ವರಮ್  
ಮಹಿಳೆಯರ ಶಬರಿಮಲೆ- ಅಟ್ಟುಕಲ್ ಭಗವತಿ ಮಂದಿರ  
ಶಕ್ತಿಮಾತೆ ತುಳಜಾ ಭವಾನಿ  
ಶ್ರೀದೇವಿ ಸರಸ್ವತಿಯ ಐತಿಹಾಸಿಕ ಮಂದಿರ- ಭೋಜಶಾಲಾ  
ಬಾವನ್‌ಗಜದ ಜೈನ ಸಿದ್ಧ ಕ್ಷೇತ್ರ  
ಏಳು ಬೆಟ್ಟದೊಡೆಯ ಶ್ರೀ ವೆಂಕಟೇಶ