ಮುಖ್ಯ ಪುಟ > ಧರ್ಮ > ಧಾರ್ಮಿಕ ಯಾತ್ರೆ > ಕ್ಷೇತ್ರಗಳು
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಗುಜರಾತಿನ ಸ್ತಂಭೇಶ್ವರ ಮಹಾದೇವ
WD
ಪುರಾಣಗಳ ಪ್ರಕಾರ
ಶಿವನ ಪುತ್ರ ಕಾರ್ತಿಕೇಯನನ್ನು ಆರರ ಹರೆಯದಲ್ಲಿ ದೇವತೆಗಳ ಸೇನೆಯ ಅಧಿಪತಿಯಾಗಿ ನೇಮಿಸಲಾಗಿತ್ತು. ದೇವಾನುದೇವತೆಗಳು ಮತ್ತು ಋಷಿಮುನಿಗಳು ತಾರಕಾಸುರನ ಭೀತಿಯನ್ನು ಎದುರಿಸುತ್ತಿದ್ದ ವೇಳೆ ಕಾರ್ತಿಕೇಯನಿಗೆ ಈ ಜವಾಬ್ದಾರಿ ಒಪ್ಪಿಸಲಾಗಿತ್ತು. ತಾರಕಾಸುರನನ್ನು ಕೊಂದ ಕಾರ್ತಿಕೇಯ ಈ ಮೂಲಕ ಎಲ್ಲರಿಗೂ ನಿರಾಳತೆ ಉಂಟುಮಾಡಿದ.

ಆದರೆ ತಾರಕಾಸುರ ಅತಿದೊಡ್ಡ ಶಿವಭಕ್ತ. ಈ ಸತ್ಯವು ಗೊತ್ತಾದ ಬಳಿಕ ಕಾರ್ತಿಕೇಯನಿಗೆ ತನ್ನ ಕೃತ್ಯದ ಕುರಿತು ಪಶ್ಚಾತಾಪ ಉಂಟಾಗುತ್ತದೆ. ಈ ವೇಳೆಯಲ್ಲಿ ಕಾರ್ತಿಕೇಯನನ್ನು ಕೊಂದ ಜಾಗದಲ್ಲೇ ಶಿವ ದೇವಾಲಯವನ್ನು ಸ್ಥಾಪಿಸಲು ಭಗವಾನ್ ವಿಷ್ಣು ಕಾರ್ತಿಕೇಯನಿಗೆ ಸಲಹೆ ನೀಡುತ್ತಾನೆ.
WD
ಅಂತೆಯೇ ಕಾರ್ತಿಕೇಯ ದೇವಾಲಯ ನಿರ್ಮಿಸುತ್ತಾನೆ. ಇಲ್ಲಿ ಎಲ್ಲಾ ದೇವತೆಗಳು ಸೇರಿ 'ವಿಶ್ವನಂದಕ' ಎಂಬ ಸ್ತಂಭವೊಂದನ್ನು ಸ್ಥಾಪಿಸುತ್ತಾರೆ. ಈ ಸ್ತಂಭದಲ್ಲಿ ಶಿವನ ಆವಾಹನೆಯಾಗುತ್ತದೆ. ಆ ಬಳಿಕ ಈ ದೇವಾಲಯವು ಸ್ತಂಭೇಶ್ವರ ದೇವಾಲಯವೆಂಬ ಪ್ರಸಿದ್ಧಿ ಪಡಕೊಂಡಿತು ಎಂಬುದಾಗಿ ಸ್ಕಂದ ಪುರಾಣ ಹೇಳುತ್ತದೆ.


ಉತ್ಸವ
WD
ಮಹಾಶಿವರಾತ್ರಿಯ ವೇಳೆ ಈ ಸ್ತಂಭೇಶ್ವರ ದೇವಾಲಯದಲ್ಲಿ ಜಾತ್ರೆ ನಡೆಯುತ್ತದೆ. ಅಂತೆಯೇ ಪ್ರತೀ ಅಮವಾಸ್ಯೆಯ ವೇಳೆಗೂ ಇಲ್ಲಿ ಹಬ್ಬನಡೆಸಲಾಗುತ್ತದೆ. ಹಿಂದೂ ಕ್ಯಾಲೆಂಡರಿನ ಮೊದಲ ಹಾಗೂ 11ದಿನ ಮತ್ತು ಹುಣ್ಣಿಮೆಯ ದಿನದಂದು ರಾತ್ರಿಯಿಡೀ ಇಲ್ಲಿ ಭಕ್ತರು ದೇವರನ್ನು ಪೂಜಿಸಿ ಆರಾಧಿಸುತ್ತಾರೆ.

ಅಲೆಗಳ ಅಬ್ಬರದ ವೇಳೆ ಶಿವಲಿಂಗವನ್ನು ಅಲೆಗಳು ಸುತ್ತುವರಿಯುವ ಇಲ್ಲಿನ ಈ ಮನಮೋಹಕ ದೃಶ್ಯವನ್ನು ಸವಿಯಲು ಭಕ್ತಾದಿಗಳು ದೂರದೂರದೂರುಗಳಿಂದ ಆಗಮಿಸುತ್ತಾರೆ.
ವೀಡಿಯೋ ವೀಕ್ಷಿಸಿ
<< 1 | 2 
ಫೋಟೋಗ್ಯಾಲರಿ
ಸ್ತಂಭೇಶ್ವರ ಮಹಾದೇವ
ವೆಬ್‌ದುನಿಯಾ ಚರ್ಚೆ
ಸ್ತಂಭೇಶ್ವರ ಮಹಾದೇವ
ಮತ್ತಷ್ಟು
ತಿರುಚಾನೂರ್ ಪದ್ಮಾವತಿ ಮಂದಿರ  
ಸೌರಾಷ್ಟ್ರ ಸೋಮನಾಥ  
ಕದರಹಿತ ಮಾಯೆ ಶನಿ ಶಿಂಗ್ಣಾಪುರ  
ವಾರಣಾಸ್ಯಮ್ ಚಃ ವಿಶ್ವೇಶ್ವರಮ್  
ಮಹಿಳೆಯರ ಶಬರಿಮಲೆ- ಅಟ್ಟುಕಲ್ ಭಗವತಿ ಮಂದಿರ  
ಶಕ್ತಿಮಾತೆ ತುಳಜಾ ಭವಾನಿ