ಅವರ ಜನ್ಮಸ್ಥಳದಿಂದ ಸುಮಾರು 80 ಕಿ.ಮೀ. ದೂರದಲ್ಲಿರುವ ಹನುಮಾನ್ಗಢ ಜಿಲ್ಲೆಯ ನೋಹಾರ್ ಬ್ಲಾಕ್ನಲ್ಲಿ ಗೋಗಾಮಡಿ ಧಮೀನ್ ಎಂಬ ಸ್ಥಳವೊಂದಿದೆ. ಇಲ್ಲೇ ಅವರ ಸಮಾಧಿ ಇದೆ. ಇಲ್ಲಿನ ವಿಶೇಷತೆಯೆಂದರೆ ಇಲ್ಲಿರುವ ಪೂಜಾರಿಗಳಲ್ಲಿ ಒಬ್ಬರು ಹಿಂದೂ ಮತ್ತು ಇನ್ನೊಬ್ಬರು ಮುಸ್ಲಿಂ. ಇದು ಕೋಮು ಸೌಹಾರ್ದತೆಯ ಅತ್ಯಂತ ಶ್ರೇಷ್ಠ ಪ್ರತೀಕವಾಗಿ ಗಮನ ಸೆಳೆಯುತ್ತದೆ. ಶ್ರಾವಣ ಹುಣ್ಣಿಮೆಯಿಂದ ಹಿಡಿದು ಭಾದ್ರಪದದ ಹುಣ್ಣಿಮೆವರೆಗೆ ಇಲ್ಲಿ ಉತ್ಸವ ಜರುಗುತ್ತದೆ. ಆ ದಿನಗಳಲ್ಲಿ ಗೋಗ ದೇವರ ಆಶೀರ್ವಾದ ಪಡೆದು ಪುನೀತರಾಗಲು ಇಲ್ಲಿಗೆ ಲಕ್ಷಾಂತರ ಮಂದಿ ಭಕ್ತರು ಆಗಮಿಸುತ್ತಾರೆ. ಇಡೀ ವಾತಾವರಣವೇ ಭಕ್ತಿ ಸುಧೆಯಲ್ಲಿ ಮಿಂದಿರುತ್ತದೆ.ರಾಜ್ಯದ ಸಂಸ್ಕೃತಿಯಲ್ಲಿ ಕೂಡ ಗೋಗ ದೇವರ ಪ್ರಭಾವವನ್ನು ನಾವು ಸುಲಭವಾಗಿ ಗುರುತಿಸಬಹುದಾಗಿದೆ. ಗೋಗ ದೇವರ ಜೀವನ ಮತ್ತು ತತ್ವಗಳು ಇಂದಿಗೂ ಕೂಡ ಲಕ್ಷಾಂತರ ಭಕ್ತರಿಗೆ ಪ್ರೇರಣೆಯಾಗಿದ್ದು, ಕೋಮು ಸೌಹಾರ್ದತೆಯ ನಿಟ್ಟಿನಲ್ಲಿ ಜಾಗೃತಿ ಮೂಡಿಸುತ್ತವೆ ಎನ್ನುತ್ತಾರೆ ಬುದ್ಧಿಜೀವಿಗಳು ಮತ್ತು ಇತಿಹಾಸಜ್ಞರು.ಹೋಗುವುದು ಹೇಗೆ: ವಿಮಾನ ಮಾರ್ಗ: ಸಮೀಪದ ವಿಮಾನ ನಿಲ್ದಾಣವೆಂದರೆ 250 ಕಿ.ಮೀ. ದೂರದಲ್ಲಿರುವ ಜೈಪುರ.ರೈಲು ಮಾರ್ಗ: ದತ್ತಖೇಡಾದಿಂದ 15 ಕಿ.ಮೀ. ದೂರದಲ್ಲಿದೆ ಸದಲ್ಪುರ ರೈಲು ನಿಲ್ದಾಣ. ಜೈಪುರದಿಂದ ಇಲ್ಲಿಗೆ ಸಾಕಷ್ಟು ರೈಲುಗಳಿವೆ.ರಸ್ತೆ : ಸದಲ್ಪುರವು ಜೈಪುರದಿಂದ 250 ಕಿ.ಮೀ. ದೂರದಲ್ಲಿದ್ದು, ಬೇಕಾದಷ್ಟು ಸಂಖ್ಯೆಯಲ್ಲಿ ವಾಹನ ಸೌಲಭ್ಯವಿದೆ. ಅಲ್ಲಿಂದ ದತ್ತಖೇಡಾ 15 ಕಿ.ಮೀ. ಟ್ಯಾಕ್ಸಿ ಮತ್ತು ಇತರ ವಾಹನ ಸೌಲಭ್ಯಗಳು ಸಾಕಷ್ಟಿವೆ. |
|