ಮುಖ್ಯ ಪುಟ  ಧರ್ಮ  ಸಿಖ್ ಧರ್ಮ  ದಶ ಗುರುಗಳು
 
ಗುರು ಅರ್ಜುನ್‌‌ದೇವ್
webdunia
ಸಿಖ್ ಧರ್ಮೀಯರ ಐದನೇ ಗುರುವಾದ ಗುರು ಅರ್ಜುನ್‌‌ದೇವ್ 1563ರಲ್ಲಿ ಜನಿಸಿದರು.ಸಿಖ್ ಧರ್ಮೀಯರ ನಾಲ್ಕನೇ ಗುರುವಾದ ಗುರು ರಾಮ್‌ದಾಸ್‌ರ ಮೂರನೇ ಪುತ್ರರಾಗಿದ್ದಾರೆ.

ಇವರು ಸಿಖ್ ಧರ್ಮದ ವಿವರಗಳನ್ನು ಸಂಗ್ರಹಿಸಿ ಆದಿ ಗ್ರಂಥವನ್ನು ಸಂಕಲನ ಮಾಡಿ ವಿಶ್ವದಲ್ಲಿರುವ ಸಿಖ್ ಅನುಯಾಯಿಗಳಿಗೆ ಮಹತ್ವದ ಸಂದೇಶವನ್ನು ಸಾರಲು ಸುಖಮಣಿ ಸಾಹಿಬ್ ಎನ್ನುವ ಗ್ರಂಥವನ್ನು ಬರೆದರು.

ಭಕ್ತಿ ಗೀತೆಗಳಲ್ಲಿ ಮುಸ್ಲಿಮ್ ಮೌಲ್ವಿಗಳ ಸಂದೇಶಗಳನ್ನು ಸಂಗ್ರಹಿಸಿ ಅವುಗಳನ್ನು ಗ್ರಂಥದಲ್ಲಿ ಸೇರ್ಪಡೆ ಮಾಡಿದರು.ಅಮೃತ್‌ಸರ್‌ದಲ್ಲಿರುವ ಸ್ವರ್ಣಮಂದಿರವನ್ನು ನಿರ್ಮಾಣ ಮಾಡಿದರು. ಸ್ವರ್ಣ ಮಂದಿರವನ್ನು ಎಲ್ಲ ಜಾತಿ ಜನಾಂಗದವರು ಪ್ರವೇಶಿಸಲು ನಾಲ್ಕು ದಿಕ್ಕಿನಲ್ಲಿ ದ್ವಾರಗಳನ್ನು ಸದಾ ತೆರೆದಿರುವಂತೆ ನಿರ್ಮಾಣ ಮಾಡಿದರು.

ರಾಜಾ ಜಹಾಂಗೀರ್ ಗುರು ಅರ್ಜುನ್‌‌ದೇವ್ ಅವರನ್ನು ಗಲ್ಲಿಗೇರಿಸಿದ್ದರಿಂದ ಸಿಖ್ ಇತಿಹಾಸದಲ್ಲಿ ಪ್ರಪ್ರಥಮ ಹುತಾತ್ಮರಾಗಿದ್ದಾರೆ.
ಮತ್ತಷ್ಟು
ಗುರು ರಾಮ್‌ದಾಸ್
ಗುರು ಅಮರ್‌ದಾಸ್
ಗುರು ಅಂಗದರು
ಗುರು ನಾನಕರು