ವೆಸ್ಟ್ಇಂಡೀಸ್ ತಂಡದ ಆಟಗಾರಿಗೆ, ಭಾರತದ ವಿರುದ್ಧದ ಶುಕ್ರವಾರದ ಏಕದಿನ ಪಂದ್ಯದ ಮಹತ್ವ ತಿಳಿದಿರುವುದರಿಂದ ತಂಡವನ್ನು ಗೆಲ್ಲಿಸಲು ತಮ್ಮ ಸಾಮರ್ಥ್ಯ ಮೀರಿ ಉತ್ತಮ ಪ್ರದರ್ಶನ ನೀಡಲಿದ್ದಾರೆ ಎಂದು ತಂಡದ ಉಪನಾಯಕ ಡೆನೆಶ್ ರಾಮ್ದಿನ್ ಹೇಳಿದ್ದಾರೆ. ಭಾರತ ಅಥವಾ ವೆಸ್ಟ್ ಇಂಡೀಸ್ ತಂಡವಾಗಲಿ ಶುಕ್ರವಾರದ ಪಂದ್ಯದಲ್ಲಿ ಸೋಲನುಭವಿಸಿದಲ್ಲಿ, ಸರಣಿ ಸೋಲಿಗೆ ಸಿಧ್ಧರಾಗಬೇಕಾಗುತ್ತದೆ. ಕಳೆದ ಏಕದಿನ ಪಂದ್ಯದಲ್ಲಿ ಭಾರತ ತಂಡವನ್ನು 8 ವಿಕೆಟ್ಗಳಿಂದ ಸೋಲಿಸಿದ್ದರಿಂದ ವೆಸ್ಟ್ಇಂಡೀಸ್ ತಂಡದಲ್ಲಿ ಆತ್ಮವಿಶ್ವಾಸದ ಕೊರತೆಯಿಲ್ಲ ಎಂದು ರಾಮ್ದಿನ್ ತಿಳಿಸಿದ್ದಾರೆ. ಪ್ರಸಕ್ತ ವಾರ ವೆಸ್ಟ್ಇಂಡಿಸ್ ಪಾಲಿಗೆ ಮಹತ್ವದಾಗಿದ್ದು, ನನಗೆ ಹಾಗೂ ವೆಸ್ಟ್ಇಂಡಿಸ್ ತಂಡಕ್ಕೆ ಭಾರತದ ವಿರುದ್ಧ ಶುಕ್ರವಾರದ ಪಂದ್ಯ ಗೆಲ್ಲುವ ವಿಶ್ವಾಸವಿದೆ ಅಭ್ಯಾಸ ಪಂದ್ಯದ ನಂತರ ರಾಮ್ದಿನ್ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದರು.ಭಾರತ ತಂಡವನ್ನು ಏಕದಿನ ಪಂದ್ಯದಲ್ಲಿ ಸೋಲಿಸುವುದು ಸುಲಭವಲ್ಲ ಎನ್ನುವುದನ್ನು ಒಪ್ಪಿಕೊಂಡ ಅವರು , ಆದರೆ ವೆಸ್ಟ್ಇಂಡಿಸ್ ತಂಡಕ್ಕೆ ಗೆಲುವಿನ ವಿಸ್ವಾಸವಿದೆ ಎಂದು ನುಡಿದರು. |