ಮುಖ್ಯ ಪುಟ > ಕ್ರೀಡಾ ಜಗತ್ತು > ಕ್ರಿಕೆಟ್‌ > ಕ್ರಿಕೆಟ್‌ ಸುದ್ದಿ > ಮತ್ತಷ್ಟು ಆಕ್ರಮಣಕಾರಿ ಆಟ ಅಗತ್ಯವಾಗಿತ್ತು :ಗೇಲ್
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಮತ್ತಷ್ಟು ಆಕ್ರಮಣಕಾರಿ ಆಟ ಅಗತ್ಯವಾಗಿತ್ತು :ಗೇಲ್
ಭಾರತ ವಿರುದ್ಧದ ಮೂರನೇ ಏಕದಿನ ಸರಣಿ ಪಂದ್ಯದಲ್ಲಿ ಭಾರತ ತಂಡದ ನಾಯಕ ಸಮಯೋಚಿತ ಅಬ್ಬರದ ಆಟವಾಡಿ ತಂಡವನ್ನು ಗೆಲುವಿನತ್ತ ಸಾಗಿಸಿದ ಮಹೇಂದ್ರ್ ಸಿಂಗ್ ಧೋನಿಯನ್ನು ಶ್ಲಾಘಿಸಿದ ವೆಸ್ಟ್ಇಂಡೀಸ್ ನಾಯಕ ಕ್ರಿಸ್ ಗೇಲ್, ತಮ್ಮ ತಂಡದ ಬೌಲರ್‌ಗಳು ಮತ್ತಷ್ಟು ಮಾರಕ ದಾಳಿ ನಡೆಸುವುದು ಅಗತ್ಯವಾಗಿತ್ತು ಎಂದು ಅಭಿಪ್ರಾಯಪಟ್ಟರು.

ಪಂದ್ಯದ ಆರಂಭದ ನಂತರ ಕೆಲವು ಬಾರಿ ಮಳೆಯಿಂದ ಅಡೆತಡೆಯುಂಟಾದರೂ ರಮೇಶ್ ಸರವಣನ್ ಅವರ ಅದ್ಬುತ್ ಬ್ಯಾಟಿಂಗ್ ಪ್ರದರ್ಶನದಿಂದ ವೆಸ್ಟ್‌ಇಂಡೀಸ್ ತಂಡ 27 ಓವರ್‌ಗಳಿಗೆ 185 ರನ್ ಪೇರಿಸುವಲ್ಲಿ ಯಶಸ್ವಿಯಾಯಿತು.

ಏತನ್ಮಧ್ಯೆ , ಭಾರತ ತಂಡದ ಆರಂಭಿಕ ಆಟಗಾರರಾದ ದಿನೇಶ್ ಕಾರ್ತಿಕ್ ಮತ್ತು ಗೌತಮ್ ಗಂಭೀರ್ ಉತ್ತಮ ಆಟದ ಪ್ರದರ್ಶನ ನೀಡಿ 87 ರನ್‌ಗಳನ್ನು ಪೇರಿಸುವುದರೊಂದಿಗೆ ಸುಭದ್ರ ಅಡಿಪಾಯ ಹಾಕುವಲ್ಲಿ ಯಶಸ್ವಿಯಾದರು. ತಂಡದ ನಾಯಕ ಧೋನಿ ಅದ್ಭುತ ಆಟವಾಡುವ ಮೂಲಕ ತಂಡವನ್ನು ಗೆಲ್ಲಿಸುವಲ್ಲಿ ಯಶಸ್ವಿಯಾದರು. ಡಕ್‌ವರ್ತ್ ಲೂಯಿಸ್ ನಿಯಮದ ಪ್ರಕಾರ ಭಾರತ ಏಕದಿನ ಸರಣಿ ಪಂದ್ಯದಲ್ಲಿ 2-1 ರಿಂದ ಮುನ್ನಡೆ ಗಳಿಸಿತು.

ವೆಸ್ಟ್‌ಇಂಡೀಸ್ ತಂಡ 185ರನ್‌ಗಳಿಸಿದ ನಂತರ ನಮಗೆ ಗೆಲ್ಲುವ ಅವಕಾಶಗಳಿವೆ ಎಂದು ಭಾವಿಸಲಾಗಿತ್ತು. ಆದರೆ ನಾವು ಮತ್ತಷ್ಟು ಆಕ್ರಮಣಕಾರಿ ಆಟವಾಡಬೇಕಿತ್ತು ಎಂದು ನಾಯಕ ಕ್ರಿಸ್ ಗೇಲ್ ಹೇಳಿದ್ದಾರೆ.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಟೆಸ್ಟ್ : ಟಾಸ್ ಗೆದ್ದು ಪಾಕ್ ಫಿಲ್ಡಿಂಗ್ ಆಯ್ಕೆ
ಭಾರತ ಪೀಡಕ ರಾಷ್ಟ್ರವಲ್ಲ :ಮೊರ್ಗಾನ್
ಕ್ರಿಕೆಟ್: ಉತ್ತರ ವಲಯ ಚಾಂಪಿಯನ್
ಧೋನಿ ಸಿಡಿಲಬ್ಬರ: 3ನೇ ಏಕದಿನದಲ್ಲಿ ಭಾರತಕ್ಕೆ ರೋಚಕ ಜಯ
ವೆಸ್ಟ್‌ಇಂಡೀಸ್ ತಂಡಕ್ಕೆ ಗೆಲುವಿನ ವಿಶ್ವಾಸ:ರಾಮ್‌ದಿನ್
ಹಾಲ್ ಆಫ್ ಫೇಮ್‌ಗೆ ಮತ್ತಷ್ಟು ಕ್ರಿಕೆಟಿಗರ ಸೇರ್ಪಡೆ