ನವದೆಹಲಿ: ಮುಂದಿನ ತಿಂಗಳು ಅರ್ಜೆಂಟೀನಾದಲ್ಲಿ ನಡೆಯಲಿರುವ ಚಾಂಪಿಯನ್ಸ್ ಚಾಲೆಂಜ್-1 ಹಾಕಿ ಟೂರ್ನಮೆಂಟ್ನಲ್ಲಿ ಪಾಲ್ಗೊಳ್ಳುವುದರಿಂದ ಭಾರತದ ಮಾಜಿ ಕಪ್ತಾನ ಗಾಯಾಳು ಸಂದೀಪ್ ಸಿಂಗ್ ವಂಚಿತರಾಗಿದ್ದಾರೆ. ಅವರ ಬದಲು 21 ಸದಸ್ಯರ ಭಾರತೀಯ ತಂಡದಲ್ಲಿ ದಿವಾಕರ್ ರಾಮ್ರನ್ನು ಸೇರಿಸಿಕೊಳ್ಳಲಾಗಿದೆ.
ಸೊಂಟ ನೋವಿನಿಂದ ಬಳಲುತ್ತಿರುವ ಮಾಜಿ ಕಪ್ತಾನನಿಗೆ ಮೂರು ವಾರಗಳ ವಿಶ್ರಾಂತಿ ಪಡೆಯಲು ವೈದ್ಯರು ಸೂಚಿಸಿದ್ದಾರೆ.