ಬೆಂಗಳೂರು : ನಾವು ಮಾಡುವ ಹಲವು ಕೆಲಸಗಳನ್ನು ಹೇಗೆ ಮಾಡಬೇಕು, ಏನು ಮಾಡಬಾರದು ಎಂಬುದನ್ನು ಶಾಸ್ತ್ರಗಳು ಹೇಳುತ್ತವೆ. ಆದರೆ ನಮ್ಮಲ್ಲಿ ಬಹಳಷ್ಟು ಜನರಿಗೆ ಅದು ತಿಳಿದಿರುವುದಿಲ್ಲ. ಹಿಂದೂ ಧರ್ಮದ ಸಂಪ್ರದಾಯದಲ್ಲಿ ಹಾಲು, ನೀರು, ಧಾನ್ಯ ಇವುಗಳಿಗೆ ಪ್ರಾಮುಖ್ಯತೆ ನೀಡುತ್ತಾರೆ. ಇವುಗಳನ್ನು ಪೂರ್ತಿಯಾಗಿ ಖಾಲಿಯಾಗುವ ಮೊದಲೇ ಮನೆಯಲ್ಲಿ ತಂದಿಟ್ಟುಕೊಳ್ಳಬೇಕು ಎಂದು ನಮ್ಮ ಹಿರಿಯರು ಹೇಳುತ್ತಿರುತ್ತಾರೆ. ಏಕೆಂದರೆ ಇವುಗಳನ್ನು ಲಕ್ಷ್ಮೀಸ್ವರೂಪವಾಗಿ ಭಾವಿಸುತ್ತಾರೆ. ಇವು ಮನೆಯ ತುಂಬಾ ಇದ್ದರೆ ಧನ ಇರುತ್ತದೆ ಎಂದು ನಂಬುತ್ತಾರೆ.