ಬೆಂಗಳೂರು : ಸೂರ್ಯನು ಧನಸ್ಸು ರಾಶಿಯಿಂದ ಮಕರ ರಾಶಿಗೆ ಸೇರುವ ಶುಭ ಸಮಯವನ್ನು ಮಕರ ಸಂಕ್ರಾಂತಿ ಎಂದು ಕರೆಯುತ್ತಾರೆ. ಹಿಂದೂ ಸಂಪ್ರದಾಯದಲ್ಲಿ ಎಲ್ಲಾ ಹಬ್ಬವನ್ನು ಚಾಂದ್ರಾಮಾನ ಮಾಸದ ಪ್ರಕಾರವೇ ಆಚರಿಸಲಾಗುತ್ತದೆ. ಆದರೆ ಮಕರ ಸಂಕ್ರಾಂತಿ ಮಾತ್ರ ಸೌರಮಾನ ಮಾಸದ ಪ್ರಕಾರ ಆಚರಿಸುವ ಏಕೈಕ ಹಬ್ಬ. ಈ ಪುಣ್ಯ ದಿವಸದಂದು ನದಿ ಸ್ನಾನ, ದೇವತೆಗಳ ಆರಾಧನೆ, ಪಿತೃಗಳಿಗೆ ತರ್ಪಣ, ಉಪವಾಸ, ಹೋಮ, ಜಪ, ದಾನಗಳಿಗೆ ತುಂಬ ಒಳ್ಳೆಯ ಸಮಯ. ಈ ಪುಣ್ಯ