ಬೆಂಗಳೂರು : ಶುಕ್ಲ ಪಕ್ಷದ ಭಾದ್ರಪದ ಮಾಸ ಚತುರ್ಥಿಯೆಂದು ಬರುವ ಹಬ್ಬವೇ ಗಣೇಶ ಚತುರ್ಥಿ. ಗಣೇಶ, ಕೈಲಾಸದಿಂದ ತನ್ನ ತವರು ಮನೆಗೆ ಬಂದ ತನ್ನ ತಾಯಿ ಗೌರಿಯನ್ನು ಮರಳಿ ಕರೆದುಕೊಂಡು ಹೋಗಲು ಭೂಲೋಕಕ್ಕೆ ಈ ದಿನ ಬರುತ್ತಾನೆ. ಆದ್ದರಿಂದ ಈ ಹಬ್ಬದಂದು ಮನೆಯಲ್ಲಿ ಗಣೇಶ ಮೂರ್ತಿಯನ್ನಿಟ್ಟು ಪೂಜೆ ಮಾಡುತ್ತಾರೆ. ಆದರೆ ಗಣೇಶ ಮೂರ್ತಿಯನ್ನು ಪ್ರತಿಷ್ಠಾಪನೆ ಮಾಡಲು ಕೆಲವು ನಿಯಮಗಳಿವೆ.