ಗ್ರಹಗಳ ಸಂಚಾರದ ಆಧಾರದ ಮೇಲೆ ಆಯಾ ಕಾಲದಲ್ಲಿ ಉಂಟಾಗುವ ಶುಭ ಫಲ ಹಾಗೂ ಅಶುಭಫಲಗಳ ವಿಶ್ಲೇಷಣೆಯೇ ಗೋಚಾರಫಲ. ಈ ಪ್ರಕ್ರಿಯೆಯಲ್ಲಿ ಬಹುತೇಕ ಒಂದೇ ರಾಶಿಯಲ್ಲಿ ದೀರ್ಘ ಕಾಲ ಸಂಚರಿಸುವ ಶನಿ, ಗುರು, ರಾಹು-ಕೇತು ಗ್ರಹಗಳ ಸ್ಥಾನಗಳನ್ನು ಗಣನೆಗೆ ತೆಗೆದುಕೊಳ್ಳುತ್ತೇವೆ. ಶನಿ ಮತ್ತು ಗುರು ಗ್ರಹಗಳು ನಮ್ಮ ಬದುಕಿನ ಪಥಗಳನ್ನೇ ಬದಲಾಯಿಸುವ ಗ್ರಹಗಳಾಗಿರುವುದರಿಂದ ಈ ಗ್ರಹಗಳಿಗೆ ಹೆಚ್ಚಿನ ಪ್ರಾಮುಖ್ಯತೆ ಕೊಡಲಾಗಿದೆ.