ಅಯೋಧ್ಯೆಯಲ್ಲಿ ಕರ್ನಾಟಕದ ಹೆಸರು ಪದೇ ಪದೇ ಕೇಳಿಬಂದು ನಾಡಿನ ಹೆಮ್ಮೆಯ ವಿಷಯದಲ್ಲಿ ಒಂದಾಯಿತು. ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ನಿರ್ಮಾಣ ಕಾಮಗಾರಿಗೆ ಪ್ರಧಾನಿ ನರೇಂದ್ರ ಮೋದಿ ಭೂಮಿ ಪೂಜೆ ನೆರವೇರಿಸಿದ್ದಾರೆ. ಈ ವೇಳೆ ಪ್ರಧಾನಿ ನರೇಂದ್ರ ಮೋದಿಗೆ ಕೋದಂಡರಾಮ ವಿಗ್ರಹವನ್ನು ಕಾಣಿಕೆ ನೀಡಿದ್ದು, ಸಮಾರಂಭದಲ್ಲಿ ನಿರೂಪಕರು ಕರ್ನಾಟಕದ ಹೆಸರನ್ನು ಪುನರುಚ್ಛರಿಸಿದರು. ಮೋದಿ ಪಡೆದ ಕೋದಂಡರಾಮ ವಿಗ್ರಹ ಕರುನಾಡಿನಲ್ಲಿ ಸಿದ್ಧಗೊಂಡ ಕೊಡುಗೆ ಎನ್ನುವುದು ವಿಶೇಷ.