ಬೆಂಗಳೂರು: ಹೋಳಿ ಹಬ್ಬ ಬಂತೆಂದರೆ ಸಾಕು. ಬಣ್ಣಗಳದ್ದೇ ನೆನಪು ಬರುತ್ತದೆ. ದೀಪಾವಳಿ ಬಿಟ್ಟರೆ ಮೋಜಿನ ಆಟ ಆಡುವುದು ಇದೇ ಹಬ್ಬದ ಸಂದರ್ಭದಲ್ಲೇ ಅನಿಸುತ್ತದೆ. ಆದರೆ ಬಣ್ಣದ ಒಕುಳಿ ಹರಿಸುವುದರ ಹಿಂದೆ ಒಂದು ಸಣ್ಣ ಕತೆಯಿದೆ. ದ್ವಾಪರಯುಗದಲ್ಲಿ ಕೃಷ್ಣ ಬಾಲ್ಯದಲ್ಲಿದ್ದಾಗ ನಡೆದ ಘಟನೆಯದು. ಕೃಷ್ಣ ತನ್ನ ಸಾಕು ತಾಯಿ ಯಶೋದೆಗೆ ಸದಾ ಪ್ರಶ್ನೆ ಕೇಳುತ್ತಿದ್ದನಂತೆ. ಹೀಗಿರುವಾಗ ಒಂದು ದಿನ ನಾನೇಕೆ ಕಪ್ಪಗಿದ್ದೇನೆ. ರಾಧೆಯೇಕೆ ಬೆಳ್ಳಗಿದ್ದಾಳೆ ಎಂದು ಕೃಷ್ಣ ಮೊಂಡು ಹಠ