ಬೆಂಗಳೂರು: ಲಾಕ್ ಡೌನ್ ನಿಂದಾಗಿ ಪ್ರಮುಖ ದೇವಾಲಯಗಳೇ ಬಾಗಿಲು ಬಂದ್ ಮಾಡಿ ಕೂತಿವೆ. ನಿತ್ಯದ ಪೂಜೆ ಬಿಟ್ಟರೆ ಬೇರೆ ಯಾವುದೇ ಸೇವೆಗಳು ನಡೆಯುತ್ತಿಲ್ಲ. ಈ ನಡುವೆ ಮದ್ಯದಂಗಡಿ ತೆರೆದಿರುವಾಗ ದೇವಾಲಯ ತೆರೆಯಲೂ ಅವಕಾಶ ನೀಡೋದಿಲ್ಲ ಯಾಕೆ ಎಂದು ಅರ್ಚಕರು ಸರ್ಕಾರವನ್ನು ಪ್ರಶ್ನಿಸುತ್ತಿದ್ದಾರೆ.