ಮುಂಬೈ: ಒಂದೇ ಒಂದು ಪಂದ್ಯದಿಂದ ವಿಕೆಟ್ ಕೀಪರ್ ಬ್ಯಾಟ್ಸ್ ಮನ್ ದಿನೇಶ್ ಕಾರ್ತಿಕ್ ಭವಿಷ್ಯವೇ ಬದಲಾಗಿದೆ. ಇದಕ್ಕಿಂತ ಮೊದಲು ತಂಡಕ್ಕೆ ಆಯ್ಕೆಯಾಗುವುದೇ ಕಷ್ಟವಾಗಿದ್ದ ಕಾರ್ತಿಕ್ ಇದೀಗ ಮುಂದಿನ ದಿನಗಳಲ್ಲಿ ಟೀಂ ಇಂಡಿಯಾ ಸೀಮಿತ ಓವರ್ ಗಳ ಖಾಯಂ ವಿಕೆಟ್ ಕೀಪರ್ ಧೋನಿಗೇ ಸವಾಲೊಡ್ಡುವ ಮಟ್ಟಿಗೆ ಬೆಳೆದಿದ್ದಾರೆ.