ಅಹಮ್ಮದಾಬಾದ್: ಭಾರತ ಮತ್ತು ಇಂಗ್ಲೆಂಡ್ ನಡುವಿನ ಹೊನಲು ಬೆಳಕಿನ ಟೆಸ್ಟ್ ಪಂದ್ಯ ಕೇವಲ ಎರಡೇ ದಿನದಲ್ಲಿ ಮುಕ್ತಾಯ ಕಂಡಿದ್ದು, ಹಲವರು ಪಿಚ್ ಮೇಲೆ ಅಸಮಾಧಾನ ತೋರುವಂತೆ ಮಾಡಿದೆ. ಆದರೆ ಮಾಜಿ ಕ್ರಿಕೆಟಿಗ ಸುನಿಲ್ ಗವಾಸ್ಕರ್, ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಸೇರಿದಂತೆ ಕೆಲವರು ಹೇಳುವಂತೆ ಇದು ಪಿಚ್ ನ ಸಮಸ್ಯೆಯಲ್ಲ. ಇಲ್ಲಿ ಬ್ಯಾಟ್ಸ್ ಮನ್ ಗಳು ತಾಳ್ಮೆಯಿಂದ ನಿಂತು ಆಡಿದರೆ ರನ್ ಗಳಿಸಲು ಸಾಧ್ಯವಿದೆ. ಇಲ್ಲಿನ ಪಿಚ್ ನಲ್ಲಿ