ಹೈದರಾಬಾದ್: ಬಾಲ್ ವಿರೂಪಗೊಳಿಸಿದ ಪ್ರಕರಣದಿಂದಾಗಿ ಆಸ್ಟ್ರೇಲಿಯಾ ಕ್ರಿಕೆಟಿಗರು ಮುಜುಗರಕ್ಕೀಡಾಗಿದ್ದಾರೆ. ರಾಜಸ್ಥಾನ್ ರಾಯಲ್ಸ್ ತಂಡಕ್ಕೆ ಸ್ಟೀವ್ ಸ್ಮಿತ್ ರಾಜೀನಾಮೆ ಇತ್ತ ಬೆನ್ನಲ್ಲೇ ಇದೀಗ ಆಸೀಸ್ ಉಪನಾಯಕ ಹೈದರಾಬಾದ್ ಸನ್ ರೈಸರ್ಸ್ ಪರ ಆಡುವ ಡೇವಿಡ್ ವಾರ್ನರ್ ಬಗ್ಗೆ ಪ್ರಶ್ನೆ ಮೂಡಿದೆ.ಡೇವಿಡ್ ವಾರ್ನರ್ ರನ್ನು ಹೈದರಾಬಾದ್ ತಂಡ ಹೊರಗಿಡುವ ಧೈರ್ಯ ಮಾಡುತ್ತಾ ಎಂಬ ಪ್ರಶ್ನೆಗೆ ಕೋಚ್, ಮೆಂಟರ್ ವಿವಿಎಸ್ ಲಕ್ಷ್ಮಣ್ ಉತ್ತರಿಸಿದ್ದಾರೆ. ಸದ್ಯಕ್ಕೆ ವಾರ್ನರ್ ರನ್ನು ತಂಡದಿಂದ ಹೊರಗಿಡುವ ಬಗ್ಗೆ ಯೋಚನೆ ನಡೆಸಿಲ್ಲ.