ಮುಂಬೈ:ಬಾಂಗ್ಲಾದೇಶ ವಿರುದ್ಧ ಟೆಸ್ಟ್ ಸರಣಿ ಮುಗಿದ ಬಳಿಕ ಭಾರತದಲ್ಲಿ ಏಕದಿನ ಮತ್ತು ಟಿ20 ಸರಣಿ ಆಡಲು ಶ್ರೀಲಂಕಾ ಬಂದಿಳಿಯಲಿದೆ.ಈ ಸರಣಿಯಲ್ಲಿ ಟೀಂ ಇಂಡಿಯಾದ ಕೆಲವು ಆಟಗಾರರು ಹಲವು ಕಾರಣಗಳಿಗೆ ಡ್ರಾಪ್ ಔಟ್ ಆಗಬಹುದು. ಇನ್ನು, ಕೆಎಲ್ ರಾಹುಲ್ ಈಗಾಗಲೇ ರಜೆ ಪಡೆದಿದ್ದಾರೆ.ಕಳೆದ ಸರಣಿಯಲ್ಲಿ ಟೀಂ ಇಂಡಿಯಾದ ಕೆಲವು ಯುವ ಆಟಗಾರರು ಸಾಮರ್ಥ್ಯ ಸಾಬೀತುಪಡಿಸಿದ್ದಾರೆ. ಹೀಗಾಗಿ ಕೆಲವು ಆಟಗಾರರು ಡ್ರಾಪ್ ಔಟ್ ಆಗುವ ಸಾಧ್ಯತೆಯಿದೆ.ಮೊಹಮ್ಮದ್ ಶಮಿ, ಕುಲದೀಪ್ ಸೇನ್ ಗಾಯಗೊಂಡು ಹೊರಗುಳಿಯಲಿದ್ದಾರೆ.