ಕೋಲ್ಕೊತ್ತಾ: ಸೌರವ್ ಗಂಗೂಲಿಗೆ ಕೋಲ್ಕೊತ್ತಾ ಮಹಾನಗರ ಪಾಲಿಕೆ ನೋಟೀಸ್ ನೀಡಿದೆ. ಆದರೆ ಗಂಗೂಲಿಗೆ ಈ ರೀತಿ ನೋಟಿಸ್ ನೀಡಲು ಕಾರಣವಾಗಿದ್ದು ಏನು ಗೊತ್ತಾ? ಒಂದು ಸೊಳ್ಳೆ ಎಂದರೆ ನೀವು ನಂಬಲೇ ಬೇಕು. ಕೋಲ್ಕೊತ್ತಾದಲ್ಲಿ ಇತ್ತೀಚೆಗೆ ಡೆಂಗ್ಯೂ ಜ್ವರದ ಹಾವಳಿ ಜೋರಾಗಿದೆ. ಇದಕ್ಕೆ ತಮ್ಮ ಮನೆ ಸುತ್ತಮುತ್ತ ಶುಚಿಯಾಗಿಡಬೇಕು ಎಂದು ಮಹಾನಗರ ಪಾಲಿಕೆ ಸೂಚನೆ ನೀಡಿದೆ.ಆದರೆ ಗಂಗೂಲಿ ನಿವಾಸದ ಸುತ್ತಮುತ್ತ ಶುಚಿಯಾಗಿಟ್ಟುಕೊಂಡಿಲ್ಲ. ಇದೇ ಕಾರಣಕ್ಕೆ ಗಂಗೂಲಿಗೆ ನಗರ ಪಾಲಿಕೆ ನೋಟಿಸ್