ರಾಂಚಿ: ಅದೊಂದಿತ್ತು ಕಾಲ. ಟೀಂ ಇಂಡಿಯಾ ಯಾವುದೇ ಪಂದ್ಯವಾಡಲಿ. ಎಲ್ಲರ ಗಮನ ಸಚಿನ್ ತೆಂಡುಲ್ಕರ್ ಮೇಲೆಯೇ ಇರುತ್ತಿತ್ತು. ಎದುರಾಳಿಗಳನ್ನು ಅವರನ್ನೇ ಟಾರ್ಗೆಟ್ ಮಾಡುತ್ತಿದ್ದರು. ಆದರೆ ರಾಹುಲ್ ದ್ರಾವಿಡ್ ಸದ್ದಿಲ್ಲದೆಯೇ ಎದುರಾಳಿಗಳ ತಲೆ ಕೆಡಿಸುತ್ತಿದ್ದರು.