ಲೋಕಸಭೆ ಚುನಾವಣೆ ಮೇಲೆ ಕಣ್ಣಿರಿಸಿ ಕೇಜ್ರಿವಾಲ್ ರಾಜೀನಾಮೆ ನೀಡಿದ್ರೆ?
ವೆಬ್ದುನಿಯಾ|
Last Modified ಸೋಮವಾರ, 17 ಫೆಬ್ರವರಿ 2014 (19:38 IST)
PR
PR
ಆಮ್ ಆದ್ಮಿ ಪಕ್ಷ ತಾನು ದೆಹಲಿ ಜನತೆಗೆ ನೀಡಿದ ಮುಖ್ಯ ಭರವಸೆಯಾದ ಜನಲೋಕ ಪಾಲ್ ಜಾರಿಗೆ ವಿಫಲವಾದ್ದರಿಂದ ಅಧಿಕಾರವನ್ನು ತ್ಯಜಿಸಿತು. ಕೇಜ್ರಿವಾಲ್ ಅವರ ಈ ಕ್ರಮ ಲೆಕ್ಕಾಚಾರದಿಂದ ಕೂಡಿತ್ತು. ಸದನದಲ್ಲಿ ಜನಲೋಕಪಾಲ ವಿಧೇಯಕ ಮಂಡನೆಗೆ ವಿಫಲನಾದರೆ ಒಂದು ನಿಮಿಷವೂ ಅಧಿಕಾರದಲ್ಲಿ ಉಳಿಯುವುದಿಲ್ಲ ಎಂದು ಹೇಳಿದ್ದ ಕೇಜ್ರಿವಾಲ್ ತಮ್ಮ ಮಾತಿನಂತೆ ಮಹತ್ವದ ಮಸೂದೆ ಬೆಳಕು ಕಾಣುವುದಿಲ್ಲ ಎಂದು ಸ್ಪಷ್ಟವಾದ ಕ್ಷಣವೇ ರಾಜೀನಾಮೆ ಬಿಸಾಕಿದರು. ತಾವು ನೈತಿಕತೆಯ ಆಧಾರದ ಮೇಲೆ ರಾಜೀನಾಮೆ ನೀಡುತ್ತಿರುವುದಾಗಿ ಕೇಜ್ರಿವಾಲ್ ಹೇಳಿದರು. ಕೇಜ್ರಿವಾಲ್ ರಾಜೀನಾಮೆ ನಿಲುವು ತೆಗೆದುಕೊಂಡ ಬಳಿಕ ಅವರು ಯಾವ ಸ್ಥಿತಿಯಲ್ಲಿ ಉಳಿದಿದ್ದಾರೆ?