ಹಿಂದು ಪುರಾಣಗಳಲ್ಲಿ ನಾವು ಸತ್ತ ಮೇಲೆ ಏನಾಗುತ್ತೇವೆ ಎಂಬುದನ್ನು ಗರುಡ ಪುರಾಣದಲ್ಲಿ ಹಿಂದೆಯೇ ಬರೆದಿಡಲಾಗಿದೆ. ಅಂತೆಯೇ ಅದರಲ್ಲಿ ಯಾವ ಪಾಪ ಕರ್ಮಕ್ಕೆ ಯಾವ ಪ್ರಕಾರದ ಶಿಕ್ಷೆ ಎಂಬುದನ್ನು ಕೊಡಲಾಗಿದೆ. ಅಲ್ಲದೇ ಸ್ವರ್ಗ ಮತ್ತು ನರಕದ ಕಲ್ಪನೆಯ ಬಗ್ಗೆಯೂ ಸಹ ಈ ಗ್ರಂಥದಲ್ಲಿ ಉಲ್ಲೇಖಿಸಲಾಗಿದೆ. ಅದನ್ನು ಕೆಲವರು ಓದಿ ತಿಳಿದುಕೊಂಡರೆ ಇನ್ನು ಕೆಲವರ ಮನೆಯಲ್ಲಿ ಚಿಕ್ಕ ಮಕ್ಕಳು ತಪ್ಪು ಮಾಡಿದರೆ ಹಿರಿಯರು ನರಕದ ಭಯವನ್ನು ಹುಟ್ಟಿಸುತ್ತಾರೆ. ಹಾಗಾದ್ರೆ ನಿಜಕ್ಕೂ ನರಕ ಇದೆಯೇ ಅದು ಹೇಗೆಲ್ಲಾ ಇರಬಹುದು ಎಂಬ ಕೂತುಹಲ ಎಲ್ಲರಿಗೂ ಇರುವುದು ಸಾಮಾನ್ಯವಾದ ಸಂಗತಿ.