ಅತೀಯಾದ ಪೌಷ್ಟಿಕ ಅಂಶವನ್ನು ತನ್ನ ಒಡಲಿನಲ್ಲಿ ಇಟ್ಟುಕೊಂಡಿರುವ ಈ ಕರ್ಜೂರ ಸೇವನೆ ಹಲವು ರೋಗಗಳಿಗೆ ರಾಮಬಾಣವು ಹೌದು. ಚಳಿಗಾಲದಲ್ಲಿ ಶೀತ, ಕೆಮ್ಮು, ಗಂಟಲು ನೋವು ಸಾಮಾನ್ಯವಾಗಿ ಕಂಡು ಬರುವ ಲಕ್ಷಣ. ಈ ಸಮಯದಲ್ಲಿ ದೇಹವನ್ನು ಬೆಚ್ಚಗಿರಿಸುವ ಪದಾರ್ಥಗಳ ಸೇವನೆ ಮಾಡಿದರೆ ಒಳ್ಳೆಯದು. ಕರ್ಜೂರ ಇದಕ್ಕೆ ಹೆಚ್ಚು ಸೂಕ್ತವಾದ ಒಣ ಹಣ್ಣಾಗಿದೆ.