ಬೆಂಗಳೂರು : ಇಂಗು-ತೆಂಗಿದ್ರೆ ಮಂಗನೂ ಅಡುಗೆ ಚೆನ್ನಾಗಿ ಮಾಡುತ್ತೆ ಎಂಬ ಮಾತಿದೆ. ಆದರೆ, ಇಂಗು ಬರೀ ಅಡುಗೆಮನೆಯಲ್ಲದೆ ಔಷಧಿ ಕೋಣೆಯಲ್ಲೂ ತನ್ನ ಪರಿಮಳ ಬೀರುತ್ತದೆ. ಅಯುರ್ವೇದದಲ್ಲಿ ಇಂಗಿನ ಮಹತ್ವವನ್ನು ಬಹುವಾಗಿ ಹೊಗಳಲಾಗಿದೆ. ಅಜೀರ್ಣದಿಂದ ಹಿಡಿದು ಕ್ಯಾನ್ಸರ್ ವರೆಗೆ ಬಗೆ ಬಗೆ ಕಾಯಿ ಕಸಾಲೆಗೆ ಇಂಗು ರಾಮಬಾಣವಾಗಬಲ್ಲುದು. *ಅಜೀರ್ಣಕ್ಕೆಮದ್ದು: ವಾತ ದೋಷವನ್ನು ನಿವಾರಿಸುವ ಉತ್ತಮ ಸಂಬಾರ ದ್ರವ್ಯಎಂದು ಆಯುರ್ವೇದದಲ್ಲಿ ಪರಿಗಣಿಸಲಾಗಿದೆ. ಅಜೀರ್ಣ, ಗ್ಯಾಸ್ಟ್ರಿಕ್ ಮುಂತಾದ ಜಠರ ಸಂಬಂಧಿ ಕಾಯಿಲೆಗಳಿಗೆ ಇಂಗು ಪರಿಹಾರವಾಗಬಲ್ಲುದು. ಪಚನ