ಬಿಸಿಲಿನ ಬೇಗೆಯೇ ಅಂತದ್ದು. ಎಷ್ಟು ನೀರು ಕುಡಿದರೂ ಸಾಕು ಎಂದೆನಿಸದೇ ಇರುವ ಕಾಲವದು. ದೇಹವು ನಿರ್ಜಲೀಕರಣಗೊಳ್ಳುವ ಸ್ಥಿತಿಯನ್ನು ತಲುಪಿರುತ್ತವೆ. ಆದುದರಿಂದಲೇ ಬಿಸಿಲಿನ ತಾಪದಲ್ಲಿ ತಂಪಾದ ಪಾನೀಯಗಳು, ಐಸ್ಕ್ರೀಂಗಳಿಗೆ ಬೇಡಿಕೆ ಜಾಸ್ತಿ. ಆದರೆ ತಂಪಾದ ಪಾನೀಯಗಳೂ ಸಹ ಜಾಸ್ತಿ ಹೊತ್ತು ದಾಹವನ್ನು ತಣಿಸುವುದಿಲ್ಲ. ಕ್ಷಣಮಾತ್ರಕ್ಕೆ ಮಾತ್ರ ಬಾಯಾರಿಕೆಯನ್ನು ತಣಿಸುತ್ತವೆ. ನಾವು ಮನೆಯಲ್ಲಿಯೇ ಹಣ್ಣಿನ ರಸಗಳನ್ನು ತಯಾರಿಸಿಕೊಂಡು ಕುಡಿಯಬಹುದು. ಅಂತಹ ಹಣ್ಣಿನ ರಸಗಳನ್ನು ತಯಾರಿಸಿಕೊಂಡರೆ ದೇಹಕ್ಕೂ ಆಹ್ಲಾದ ಎಂದೆನಿಸುತ್ತದೆ. ಆರೋಗ್ಯಕ್ಕೂ ಉತ್ತಮ. ಹಾಗಾದರೆ