ಬೆಂಗಳೂರು : ಹಬ್ಬ ಹರಿದಿನಗಳಲ್ಲಿ ಹಾಗೂ ವಿಶೇಷ ಸಂದರ್ಭಗಳಲ್ಲಿ ತರಾವರಿ ಕುರುಕಲು ತಿಂಡಿಗಳನ್ನ ಮಾಡಿರುತ್ತಾರೆ. ಈ ಕುರುಕಲು ತಿಂಡಿಗಳನ್ನ ಕರಿಯಲು ಬಳಸಿದ ಎಣ್ಣೆಯನ್ನ ಹಾಗೆ ಇಟ್ಟು ಮತ್ತೆ ಅಡುಗೆ ಮಾಡುವಾಗ ಮರು ಬಳಕೆ ಮಾಡುತ್ತಾರೆ. ಆದರೆ ಇದು ಶುದ್ಧ ತಪ್ಪು. ಬಹಳಷ್ಟು ಜನರು ಗೊತ್ತಿದ್ದೋ ಗೊತ್ತಿಲದೆಯೋ ಮತ್ತೆ ಮತ್ತೆ ಇದೆ ತಪ್ಪನ್ನ ಮಾಡುತ್ತಾರೆ. ಒಮ್ಮೆ ಬಳಸಿದ ಎಣ್ಣೆಯನ್ನ ಮತ್ತೆ ಬಳಸುವುದು ತಪ್ಪು. ಇದರಿಂದ ಹಲವು ಆರೋಗ್ಯ ತೊಂದರೆಗಳಾಗುತ್ತವೆ.