ಮುದ್ರೆಗಳಲ್ಲಿ ಶೂನ್ಯ ಮುದ್ರೆಗೆ ವಿಶೇಷವಾದ ಮಹತ್ವವಿದೆ. ಮದ್ಯಬೆರಳು ಒಳಗೆ ಬಾಗಿಸಿ ಅದರ ಉಗುರು ಮೇಲಿನ ಭಾಗಕ್ಕೆ ಹೆಬ್ಬೆರಳಿನ ಮೃದುವಾದ ಭಾಗದಿಂದ ಸ್ಪರ್ಶ ಮಾಡಬೇಕು. ಉಳಿದ ಮೂರು ಬೆರಳುಗಳು ನೇರವಾಗಿ ಇರಬೇಕು.ಇದನ್ನು ಮಾಡುವುದರಿಂದ ಕಿವಿ ನೋವು ಮಾಯವಾಗುತ್ತದೆ. ಕಿವಿಯಿಂದ ಕೀವು ಬರುತ್ತಿದ್ದರೆ ಹಾಗೂ ಕಿವುಡತನ ನಿವಾರಣೆಯಲ್ಲಿ ಈ ಮುದ್ರೆ ಪ್ರಧಾನ ಪಾತ್ರ ವಹಿಸುತ್ತದೆ.