ಅದ್ಬುತ ಪ್ರತಿಭೆಗಳಿದ್ದರೂ ಜಹೀರ್ ಖಾನ್ ನಾಯಕತ್ವದ ದೆಹಲಿ ತಂಡಕ್ಕೆ ಗೆಲುವಿನ ಸಿಹಿ ಸಿಗುತ್ತಿಲ್ಲ. ಪ್ರತೀ ಪಂದ್ಯದಲ್ಲೂ ಅಂತ್ಯದವರೆಗೂ ಹೋರಾಟ ನಡೆಸುವ ದೆಹಲಿ ಬಾಯ್ಸ್ ಗೆಲುವಿನ ದಡ ತಲುಪುವಲ್ಲಿ ವಿಫಲವಾಗುತ್ತಿದ್ದಾರೆ. ದ್ರಾವಿಡ್ ಗರಡಿಯಲ್ಲಿ ಪಳಗಿರುವ ಅಪ್ಪಟ ದೇಶಿ ಪ್ರತಿಭೆಗಳಾದ ರಿಶಬ್ ಪಂತ್, ಕರುಣ್ ನಾಯರ್, ಸಂಜು ಸಾಮ್ಸನ್, ಶ್ರೇಯಸ್ ಅಯ್ಯರ್ ಅನುಭವಿಗಳಾದ ಜಹೀರ್, ಅಮಿತ್ ಮಿಶ್ರಾ, ಆಲ್ರೌಂಡರ್ ಮೋರಿಸ್, ಆಸೀಸ್ ವೇಗಿ ಪಟ್ ಕಮಿನ್ಸ್, ಸ್ಫೋಟಕ ಬ್ಯಾಟ್ಸ್`ಮನ್ ಕೋರೆ ಅಂಡರ್ಸನ್ ಇವೆಲ್ಲದರ ಜೊತೆಗೆ ರಾಹುಲ್ ದ್ರಾವಿಡ್`ರಂತಹ ಕೋಚಿಂಗ್ ಇದ್ದರೂ ಗೆಲ್ಲಲು ಸಾಧ್ಯವಾಗುತ್ತಿಲ್ಲ. ಪ್ರತೀ ಪಂದ್ಯದಲ್ಲೂ ಎದುರಾಳಿಗಳನ್ನ ಬೆಚ್ಚಿಬೀಳಿಸುವ ಡೆಲ್ಲಿ ಆಟಗಾರರು ಜಯ ಹೊಸ್ತಿಲಲ್ಲೇ ಸೋತು ಸುಣ್ಣವಾಗುತ್ತಿದ್ದಾರೆ.