ಬೆಂಗಳೂರು: ಸ್ಯಾಂಡಲ್ ವುಡ್ ನ ಹಿರಿಯ ನಿರ್ಮಾಪಕ ದ್ವಾರಕೀಶ್ ಗೆ ಹಳೆಯ ಸಾಲ ಈಗ ಉರುಳಾಗಿ ಪರಿಣಮಿಸಿದೆ. ‘ಚಾರುಲತಾ’ ಸಿನಿಮಾ ನಿರ್ಮಾಣದ ವೇಳೆ ನಿರ್ಮಾಪಕ ಕೆಸಿಎನ್ ಚಂದ್ರಶೇಖರ್ ಅವರಿಂದ ಪಡೆದಿದ್ದ 50 ಲಕ್ಷ ರೂ.ಗಳ ಸಾಲ ವಾಪಸ್ ಮಾಡಿಲ್ಲ ಎಂಬ ಪ್ರಕರಣ ಕೋರ್ಟ್ ಮೆಟ್ಟಿಲೇರಿದೆ.