ಬೆಂಗಳೂರು: ರಾಜರಾಜೇಶ್ವರಿ ನಗರ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ಮುನಿರತ್ನ ಪರ ಚಾಲೆಂಜಿಂಗ್ ಸ್ಟಾರ್ ದರ್ಶನ್ ಪ್ರಚಾರ ನಡೆಸಿದ್ದಾರೆ. ಚಾಲೆಂಜಿಂಗ್ ಸ್ಟಾರ್ ನೋಡಲೆಂದೇ ನೂರಾರು ಜನ ಸೇರಿದ್ದು, ದರ್ಶನ್ ಅಬ್ಬರದ ಪ್ರಚಾರ ನಡೆಸಿದ್ದಾರೆ. ಇನ್ನು, ಇಲ್ಲಿರುವ ಅಭಿಮಾನಿಗಳು ನನ್ನ ಅಭಿಮಾನಿಗಳಲ್ಲ. ಇವರೆಲ್ಲಾ ಮುನಿರತ್ನ ಅಭಿಮಾನಿಗಳು. ಚುನಾವಣೆಗೂ ನನ್ನ ಅಭಿಮಾನಿಗಳಿಗೂ ಸಂಬಂಧ ಕಲ್ಪಿಸಬೇಡಿ ಎಂದು ದರ್ಶನ್ ಖಡಕ್ ಆಗಿ ಈ ವೇಳೆ ಮಾದ್ಯಮಗಳಿಗೆ ಹೇಳಿದ್ದಾರೆ. ಇನ್ನು, ಮುನಿರತ್ನ ಅವರು ಎಷ್ಟು ದಿನ