ಚೆನ್ನೈ : ಮಾರಿ ಸೆಲ್ವರಾಜ್ ನಿರ್ದೇಶನದ ಮತ್ತು ಕಾಲಿಪುಲಿ ಎಸ್ ಥಾನು ನಿರ್ಮಿಸಿರುವ ಧನುಷ್ ಅವರ ಚಿತ್ರ ‘ಕರ್ಣನ್’ ವಿಮರ್ಶಕರಿಂದ ಭಾರೀ ವಿಮರ್ಶೆಗಳನ್ನು ಗಳಿಸಿದೆ. ಇದು ಗಲ್ಲಾಪೆಟ್ಟಿಗೆಯಲ್ಲಿ ಅತಿ ಹೆಚ್ಚು ಗಳಿಕೆ ಮಾಡಿದೆ. ಇದೀಗ ಈ ಚಿತ್ರವನ್ನು ತೆಲುಗಿಗೆ ರಿಮೇಕ್ ಮಾಡಲು ನಿರ್ಧರಿಸಿದ್ದಾರೆ. ಜನಪ್ರಿಯ ಟಾಲಿವುಡ್ ನಿರ್ಮಾಪಕ ಬೆಲ್ಲಕೊಂಡ ಸುರೇಶ್ ಇದರ ರಿಮೇಕ್ ಹಕ್ಕುಗಳನ್ನು ಪಡೆದುಕೊಂಡಿದ್ದಾರೆ. ಅವರ ಪುತ್ರ ಬೆಲ್ಲಕೊಂಡ ಸಾಯಿ ಶ್ರೀನಿವಾಸ್ ಮುಖ್ಯ ಪಾತ್ರದಲ್ಲಿ ನಟಿಸಲು ಸಜ್ಜಾಗಿದ್ದಾರೆ ಎನ್ನಲಾಗಿದೆ.ತಮಿಳು