ಬೆಂಗಳೂರು: ಲಾಕ್ ಡೌನ್ ಬಳಿಕ ಕನ್ನಡ ಧಾರವಾಹಿಗಳು ಒಂದೊಂದಾಗಿ ನಿಂತು ಇದ್ದಕ್ಕಿದ್ದಂತೆ ಡಬ್ಬಿಂಗ್ ಧಾರವಾಹಿಗಳ ಪ್ರಸಾರ ಆರಂಭವಾದಾಗ ಕನ್ನಡ ಕಲಾವಿದರು, ತಂತ್ರಜ್ಞರು ಗಾಬರಿ ಬಿದ್ದುಹೋದರು. ತುತ್ತಿನ ಚೀಲಕ್ಕೆ ಏಟು ಬಿದ್ದಾಗ ಸರ್ಕಾರದ ಕದ ತಟ್ಟಿದರು.ಈಗಾಗಲೇ ಕನ್ನಡ ಕಲಾವಿದರು ಒಟ್ಟಾಗಿ ಸಭೆ ನಡೆಸಿ ಸಚಿವ ಆರ್ ಅಶೋಕ್ ಮೂಲಕ ರಾಜ್ಯ ಸರ್ಕಾರಕ್ಕೆ ಡಬ್ಬಿಂಗ್ ಧಾರವಾಹಿಗಳ ಮೇಲೆ ನಿರ್ಬಂಧ ವಿಧಿಸಲು ಮನವಿ ಮಾಡಲಾಗಿತ್ತು.ಹಾಗಿದ್ದರೂ ಕನ್ನಡ ಕಿರುತೆರೆ ವಾಹಿನಿಗಳು ಡಬ್ಬಿಂಗ್ ಧಾರವಾಹಿಗಳಿಗೆ ಮಣೆ ಹಾಕುವುದನ್ನು