ಬೆಂಗಳೂರು: ವಿಜಯೇಂದ್ರ ಪ್ರಸಾದ್ ನಿರ್ದೇಶನದ ನಟ ನೀನಾಸಂ ಸತೀಶ್ ಹಾಗೂ ಲೂಸ್ ಮಾದ ಯೋಗಿ ಪ್ರಮುಖ ಪಾತ್ರದಲ್ಲಿರುವ ಪರಿಮಳ ಲಾಡ್ಜ್ ಎನ್ನುವ ಸಿನಿಮಾದ ಟ್ರೈಲರ್ ಬಿಡುಗಡೆಗೊಂಡಿತ್ತು.ಈ ಸಿನಿಮಾದ ಟ್ರೈಲರ್ ನೋಡಿದವರು ಇದು ಸಲಿಂಗಿಗಳ ಕತೆ ಎಂದು ಅಂದುಕೊಂಡಿದ್ದರು. ಅಷ್ಟಲ್ಲದೆ, ಇಂತಹಾ ಸಿನಿಮಾ ಮಾಡುತ್ತಿರುವುದು ಯಾಕೆ ಎಂದು ಕೆಲವರು ಟೀಕೆ ಮಾಡಿದ್ದರು. ಈ ಟೀಕೆಗಳ ಬೆನ್ನಲ್ಲೇ ನಟ ನೀನಾಸಂ ಸತೀಶ್ ವಿಡಿಯೋ ಸಂದೇಶ ಮೂಲಕ ಸಿನಿಮಾ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.ಇದು ಸಲಿಂಗ