ಬೆಂಗಳೂರು: ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಕಾಲಿಕವಾಗಿ ನಿಧನರಾಗಿದ್ದರಿಂದ ಅವರು ಆರಂಭಿಸಿದ್ದ ಸಾಮಾಜಿಕ ಕೆಲಸಗಳ ಮುಂದಿನ ಭವಿಷ್ಯವೇನು ಎಂಬ ಪ್ರಶ್ನೆ ಎದ್ದಿತ್ತು.ಮೊನ್ನೆಯಷ್ಟೇ ತಮಿಳು ನಟ ವಿಶಾಲ್, ತಾವು ಪುನೀತ್ ಆರಂಭಿಸಿದ್ದ ಮಕ್ಕಳ ಉಚಿತ ಶಿಕ್ಷಣ ಯೋಜನೆಯ ಹೊಣೆ ಹೊರುವುದಾಗಿ ಹೇಳಿದ್ದರು.ಆದರೆ ಈಗ ದೊಡ್ಮನೆ ಕಡೆಯಿಂದಲೇ ಎಲ್ಲಾ ಕಾರ್ಯಕ್ರಮಗಳು ಮುಂದುವರಿದುಕೊಂಡು ಹೋಗಲಿವೆ ಎಂಬ ಮಾತು ಕೇಳಿಬಂದಿದೆ. ಶಿವರಾಜ್ ಕುಮಾರ್ ಮತ್ತು ಪುನೀತ್ ಪತ್ನಿ ಅಶ್ವಿನಿ ನೇತೃತ್ವದಲ್ಲಿ ಪುನೀತ್ ಆರಂಭಿಸಿದ್ದ ಮಕ್ಕಳಿಗೆ