ಬೆಂಗಳೂರು: ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದಲ್ಲಿ ನಟಿ ರಮ್ಯಾ ತಮ್ಮ ಜೀವನದ ಹಲವು ವಿಚಾರಗಳನ್ನು ಬಹಿರಂಗಪಡಿಸಿದ್ದಾರೆ.ಮಂಡ್ಯ ಲೋಕಸಭೆಗೆ ಸಂಸದೆಯಾಗಿ ಚುನಾವಣೆ ಎದುರಿಸುವಾಗ ತಮ್ಮ ಪರಿಸ್ಥಿತಿ ಹೇಗಿತ್ತು ಎಂಬುದನ್ನು ರಮ್ಯಾ ವಿವರಿಸಿದ್ದಾರೆ. ರಮ್ಯಾ ಆಗಷ್ಟೇ ತಂದೆಯನ್ನು ಕಳೆದುಕೊಂಡ ದುಃಖದಲ್ಲಿದ್ದರು.‘ನಮ್ಮ ತಂದೆಯನ್ನು ಕಳೆದುಕೊಂಡಾಗ ಜೀವನವೇ ಬೇಡ ಎನಿಸಿತ್ತು. ಈ ಜೀವನವನ್ನೇ ಕೊನೆಗೊಳಿಸೋಣ ಎಂದುಕೊಂಡಿದ್ದೆ. ಆದರೆ ಮಂಡ್ಯ ಜನರ ಪ್ರೀತಿ, ಬೆಂಬಲ ನನಗೆ ಸಿಕ್ಕಿತು. ನನ್ನ ದುಃಖವನ್ನೆಲ್ಲಾ ಚುನಾವಣೆಗಾಗಿ ಪರಿಶ್ರಮದ ರೂಪದಲ್ಲಿ ಹೊರಹಾಕಿದೆ. ಆ